Belagavi NewsBelgaum NewsKarnataka NewsLatest

*ಶತಾಯುಷಿ ವೇದಮೂರ್ತಿ ವಾಸಯ್ಯ ವೀರಯ್ಯ ಹೀರೆಮಠ ಲಿಂಗೈಕ್ಯ*

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಶತಾಯುಷಿ, ನಿರಂತರ ಧಾರ್ಮಿಕ ಅಧ್ಯಯನ, ಸದಾಚಾರ ಮತ್ತು ಜ್ಞಾನದ ಮೂಲಕ ಸಮಾಜವನ್ನು ಮುನ್ನಡೆಸಿ ಕಷ್ಟಗಳನ್ನು ಕೇಳಿಬಂದ ಭಕ್ತರಿಗೆ ಸದಾ ನೆಮ್ಮದಿಯ ಸಾಂತ್ವಾನ ಹೇಳುತಿದ್ದ ಹಿರಿಯ ವೇದಮೂರ್ತಿ ವಾಸಯ್ಯ ವೀರಯ್ಯ ಹೀರೆಮಠ (105) ಶನಿವಾರ ದಿ.05.09.2026 ರಂದು ಲಿಂಗೈಕ್ಯರಾದರು.


ಮೃತರು ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತಿಮ‌ಕಾರ್ಯದಲ್ಲಿ, ಮುರಗೋಡದ‌ ದುರದುಂಡೆಶ್ವರ‌ಮಠದ ಪೂಜ್ಯ ನೀಲಕಂಠ ಸ್ವಾಮೀಜಿ, ಹೊಸೂರ ‌ಮಡಿವಾಳೇಶ್ವರಮಠದ‌ ಪೂಜ್ಯ ಗಂಗಾಧರ‌ಸ್ವಾಮೀಜಿ, ಮಮದಾಪೂರದ‌‌ ಮೌನ‌ಮಲ್ಲಿಕಾರ್ಜುನ‌ ಸ್ವಾಮೀಜಿ, ಹೊಸೂರ ಬೈಲಹೊಂಗಲ ವಿರಕ್ತಮಠದ ಪ್ರಭು ನಿಲಕಂಠ ಸ್ವಾಮೀಜಿ, ಮೊರಬದ ಜಡೆಮಠದ ಪೂಜ್ಯ ಮಹೇಶ್ವರ ಶಿವಾಚಾರ್ಯರು,‌ ಹಣಬರಟ್ಟಿ ಹೀರೆಮಠದ ಬಸವಲಿಂಗ‌ ಪಟ್ಟದ ದೇವರು, ಹುಲಿಕಟ್ಟಿ ವಷಿಷ್ಠಾಶ್ರಮದ ಪೂಜ್ಯ ಭಾರ್ಗವಾನಂದ ಸ್ವಾಮೀಜಿ, ಡಾ.ಎಮ್.ವ್ಹಿ.ಸಂಗೋಳ್ಳಿ, ಮಹಾಂತೇಶ ಮತ್ತಿಕೊಪ್ಪ, ಪ್ರಕಾಶ ಮೂಗಬಸವ, ಶಿವಯ್ಯ ಮುನೇಶ್ವರಮಠ, ನಿಂಗಪ್ಪ ಆರೇರ, ಚನ್ನಪ್ಪ ಬಾಳೆಕುಂದರಗಿ, ಮಹಾಂತೇಶ ಚಿಕ್ಕೊಪ್ಪ, ಪುಂಡಲಿಕ ಕುದರಿ, ಶಂಕರಗೌಡ ಇಂಗಳಗಿ, ಶಂಕರ ತಲ್ಲೂರ, ಈಶ್ವರಚಂದ್ರ ಇಂಗಳಗಿ, ಮಲ್ಲಿಕಾರ್ಜುನ ಸಂಪಗಾಂವ, ಶ್ರೀಶೈಲ ಬಾಳೆಕುಂದರಗಿ, ಮಲ್ಲಿಕಾರ್ಜುನ ‌ವಿವೇಕಿ, ಶಿವಪ್ರಕಾಶ್ ಹಿರೇಮಠ ಸೇರಿದಂತೆ ಸಾವಿರಾರೂ ಜನರು ಭಾಗಿಯಾಗಿ ಅಂತಿಮ‌ ದರ್ಶನ ಪಡೆದರು.

Home add -Advt

Related Articles

Back to top button