*ಎಐ ಯುಗದಲ್ಲೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ: ಲಕ್ಷ್ಮೀ ಹೆಬ್ಬಾಳಕರ್* *ಹೊನ್ನಿಹಾಳದಲ್ಲಿ ಭಕ್ತಿಭಾವದ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ*

ಎಐ ಯುಗದಲ್ಲೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ: ಲಕ್ಷ್ಮೀ ಹೆಬ್ಬಾಳಕರ್
ಹೊನ್ನಿಹಾಳದಲ್ಲಿ ಭಕ್ತಿಭಾವದ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ
ಪ್ರಗತಿವಾಹಿನಿ ಸುದ್ದಿ, ಹೊನ್ನಿಹಾಳ (ಬೆಳಗಾವಿ): ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ಯುಗದಲ್ಲೂ ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ತಾಲೂಕಿನ ಹೊನ್ನಿಹಾಳ ಹಾಗೂ ಪಂತನಗರದ ವತಿಯಿಂದ ಆಯೋಜಿಸಲಾಗಿದ್ದ ನೂತನ ಶ್ರೀ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ, ಬ್ರಹ್ಮಕಳಸಾಭಿಷೇಕ ಹಾಗೂ ಮಹಾಪೂರ್ಣಾಹುತಿ ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯರು ತಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ಅಪಾರ ಮಹತ್ವ ನೀಡುತ್ತಾರೆ. ನಮ್ಮ ಸಂಸ್ಕೃತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲ. ದೇವರು, ಸ್ವಾಮಿಗಳು ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಭಾರತೀಯರಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ದೇವರ ಕಾರ್ಯವೆಂದರೆ ಎಲ್ಲವನ್ನೂ ಬದಿಗಿಟ್ಟು ಭಕ್ತಿಯಿಂದ ಪಾಲ್ಗೊಳ್ಳುವ ಪರಂಪರೆ ನಮ್ಮದಾಗಿದೆ ಎಂದು ಅವರು ಹೇಳಿದರು.
ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ವಿಘ್ನವಿನಾಶಕ ಗಣಪತಿಯನ್ನು ಪೂಜಿಸುವುದು ನಮ್ಮ ಸಂಪ್ರದಾಯ. ವಿಘ್ನಗಳು ನಿವಾರಣೆಯಾಗಲಿ, ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿ ಎಂಬ ಸಂಕಲ್ಪದೊಂದಿಗೆ ಗಣಪತಿಯ ಆಶೀರ್ವಾದ ಪಡೆದು ಕೆಲಸ ಆರಂಭಿಸುತ್ತೇವೆ. ಇಂತಹ ಪವಿತ್ರ ಸ್ಥಳದಲ್ಲಿ, ಪವಿತ್ರ ವಾತಾವರಣದಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿಯೊಂದಿಗೆ ಮಹಾಗಣಪತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿರುವುದು ಸಂತಸದ ಸಂಗತಿ ಎಂದರು.
ಎಐ ಯುಗದಲ್ಲೂ ಭಾರತೀಯತೆ ಉಳಿದಿದೆ
ಇಂದು ನಾವು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ ಆಧುನಿಕತೆಯನ್ನು ಅಪ್ಪಿಕೊಂಡರೂ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮರೆಯದೆ ಮುನ್ನಡೆಯುತ್ತಿದ್ದೇವೆ. ಇದು ನಮ್ಮ ಸಂಸ್ಕೃತಿಯ ಶಕ್ತಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಾವು ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಆರಂಭದಿಂದಲೂ ಜನರ ಕೆಲಸಗಳನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಮನೆಮಗಳಾಗಿ ಜನರು ಹೇಳಿದ ಕೆಲಸಗಳನ್ನು ಸಾಧ್ಯವಾದಷ್ಟು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಡೀ ಕ್ಷೇತ್ರವನ್ನು ನನ್ನ ಮನೆಯೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಮತ್ತೊಂದು ಅಗತ್ಯ ಎದುರಾಗುತ್ತದೆ. ಆದರೂ ಯಾವುದೇ ಬೇಸರವಿಲ್ಲದೆ ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.
ಸೋಲಿನಿಂದ ಎದೆಗುಂದದೆ ಜನರ ವಿಶ್ವಾಸ ಗಳಿಸಿದ್ದೇನೆ
ನಾನು ಕೇವಲ ಮಾತಿನಿಂದಲ್ಲ, ಕೆಲಸ ಮಾಡುವ ಮೂಲಕ ಈ ಸ್ಥಾನಕ್ಕೆ ಬಂದಿದ್ದೇನೆ. ರಾಜಕೀಯ ಜೀವನದಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಎದೆಗುಂದಲಿಲ್ಲ. ಜನರೊಂದಿಗೆ ನಿರಂತರವಾಗಿ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ವಿಶ್ವಾಸ ಗಳಿಸಿ ಇಂದು ಈ ಮಟ್ಟಕ್ಕೆ ಬಂದಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಬಾಕಿ ಇರುವ ಅಗತ್ಯ ಕಾಮಗಾರಿಗಳನ್ನೂ ಹಂತ ಹಂತವಾಗಿ ಕೈಗೊಂಡು ಪೂರ್ಣಗೊಳಿಸುವ ಭರವಸೆ ನೀಡಿದರು.
ಸೈನಿಕರ ಸಾಂಸ್ಕೃತಿಕ ಭವನ ನಿರ್ಮಾಣದ ಭರವಸೆ
ಹೊನ್ನಿಹಾಳ ಗ್ರಾಮದಲ್ಲಿ ಸೈನಿಕರ ಸಾಂಸ್ಕೃತಿಕ ಭವನ ನಿರ್ಮಿಸಿಕೊಡುವುದಾಗಿ ಈ ಹಿಂದೆ ನೀಡಿರುವ ಭರವಸೆಗೆ ತಾವು ಬದ್ಧರಾಗಿರುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರು ಯಾವುದೇ ಕೆಲಸವನ್ನು ತಮ್ಮ ಗಮನಕ್ಕೆ ತಂದರೂ, ಸಾಧ್ಯವಾದಷ್ಟು ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನನ್ನ ಶಕ್ತಿಯಾಗಿದ್ದು, ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಪರಮಪೂಜ್ಯ ಶ್ರೀ ಬಸವರಾಜ ದೇವರು, ಬೃಹನ್ಮಠ ಹೊನ್ನಿಹಾಳ, ಕೃಷ್ಣ ತೇನಗಿ, ಬಸನಗೌಡ ಪಾಟೀಲ, ನಾಗೇಶ ದೇಸಾಯಿ, ರವಿ ಮಠದ, ಭರಮಾ ಕಟಬುಗೋಳ, ನಾಗಪ್ಪ ಕಟಬುಗೋಳ, ಸುರೇಶ ನಾವಿ, ಮಹಾಬಲೇಶ್ವರ ಗುಡಕಟ್ಟಿ ಸೇರಿದಂತೆ ಗಣ್ಯರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶ್ರೀ ಮಹಾಗಣಪತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದ್ದು, ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
एआयच्या युगातही आध्यात्मिक मूल्ये जपत पुढे जाणे हीच आपली अभिमानाची बाब : लक्ष्मी हेब्बाळकर
होन्निहाळमध्ये भक्तिभावाने महागणपती प्राणप्रतिष्ठापना सोहळा
होन्निहाळ (बेळगाव): भारतीय संस्कृती आणि परंपरा आपल्या जीवनाचा अविभाज्य भाग आहेत. आध्यात्मिक मूल्ये जपत आधुनिक युगातही आपण पुढे जात आहोत, ही अभिमानाची बाब आहे, असे माजी मंत्री तथा बेळगाव ग्रामीण मतदारसंघाच्या आमदार लक्ष्मी हेब्बाळकर यांनी सांगितले.
बेळगाव तालुक्यातील होन्निहाळ आणि पंतनगर यांच्या वतीने आयोजित करण्यात आलेल्या नूतन श्री महागणपती प्राणप्रतिष्ठापना, कळसारोहण, ब्रह्मकलशाभिषेक आणि महापूर्णाहुती पूजा कार्यक्रमात भक्तिभावाने सहभागी होऊन त्या बोलत होत्या.
भारतीय समाज आपल्या संस्कृती, परंपरा आणि धार्मिक आचार-विचारांना मोठे महत्त्व देतो. आपली संस्कृती आपल्या जीवनात खोलवर रुजलेली असून, ती सहजासहजी बदलता येणार नाही. देव, संत-महंत आणि धार्मिक परंपरांबद्दल भारतीयांच्या मनात अपार श्रद्धा आणि विश्वास आहे. देवाचे कार्य असेल तर इतर सर्व गोष्टी बाजूला ठेवून भक्तिभावाने सहभागी होण्याची परंपरा आपली आहे, असे लक्ष्मी हेब्बाळकर म्हणाल्या.
कोणतेही शुभकार्य सुरू करण्यापूर्वी विघ्नहर्त्या गणपतीची पूजा करण्याची आपली परंपरा आहे. विघ्ने दूर व्हावीत आणि हाती घेतलेली कामे यशस्वी व्हावीत, या भावनेतून गणपतीचे आशीर्वाद घेऊन आपण कार्याला सुरुवात करतो. अशा पवित्र स्थळी, पवित्र वातावरणात आणि आध्यात्मिक चिंतनाच्या वातावरणात महागणपतीची प्राणप्रतिष्ठापना होत असल्याचा आनंद आहे, असे त्यांनी सांगितले.
एआयच्या युगातही भारतीय संस्कृती कायम
आज आपण कृत्रिम बुद्धिमत्ता (एआय) यासह अत्याधुनिक तंत्रज्ञानाच्या युगात जगत आहोत. मात्र आधुनिकतेचा स्वीकार करत असतानाही भारतीय संस्कृती, परंपरा आणि आध्यात्मिक मूल्ये विसरलेली नाहीत. भारतीय संस्कृतीची हीच खरी ताकद आहे, असे लक्ष्मी हेब्बाळकर यांनी स्पष्ट केले.
आपल्या राजकीय जीवनात पदापेक्षा जनसेवेला अधिक महत्त्व दिले आहे. सुरुवातीपासूनच जनतेची कामे अत्यंत श्रद्धा आणि प्रामाणिकपणे करण्याचा प्रयत्न केला आहे. मतदारसंघाची घरची मुलगी म्हणून नागरिकांनी सांगितलेली कामे पूर्ण करण्यासाठी सातत्याने प्रयत्न करत आहे. जनतेने दिलेले प्रेम आणि विश्वास कायम ठेवून मतदारसंघाच्या विकासासाठी सातत्याने कार्यरत आहे, असे त्या म्हणाल्या.
बेळगाव ग्रामीण मतदारसंघाच्या विकासासाठी मोठ्या प्रमाणात निधी आणून विविध विकासकामे हाती घेण्यात आली आहेत. संपूर्ण मतदारसंघाला आपले घर मानून काम करत आहे. एक काम पूर्ण केले की दुसऱ्या ठिकाणी नवीन कामाची गरज निर्माण होते. मात्र कोणतीही नाराजी न बाळगता जनतेच्या गरजांना प्रतिसाद देत विकासकामे सुरूच ठेवली आहेत, असे त्यांनी सांगितले.
पराभवाने खचले नाही, जनतेचा विश्वास मिळवला
मी केवळ बोलून नव्हे, तर प्रत्यक्ष काम करून या पदापर्यंत पोहोचले आहे. राजकीय जीवनात दोन वेळा निवडणुकीत पराभव झाला, तरीही खचून गेले नाही. जनतेसोबत सातत्याने राहून त्यांच्या समस्या सोडविण्यासाठी प्रयत्न केले. त्यामुळे जनतेचा विश्वास मिळवून आज या स्तरापर्यंत पोहोचले आहे, असे लक्ष्मी हेब्बाळकर म्हणाल्या.
जनतेने माझ्यावर ठेवलेल्या अपेक्षांनुसार काम करण्याचा प्रामाणिक प्रयत्न करत आहे. मतदारसंघात यापूर्वी मोठ्या प्रमाणात विकासकामे झाली आहेत. यापुढेही प्रलंबित असलेली आवश्यक कामे टप्प्याटप्प्याने पूर्ण करून देण्याची ग्वाही त्यांनी दिली.
सैनिकांच्या सांस्कृतिक भवनाच्या उभारणीचे आश्वासन
होन्निहाळ गावात सैनिकांसाठी सांस्कृतिक भवन उभारून देण्याचे आश्वासन यापूर्वीच दिले आहे. त्या आश्वासनाला आपण बांधील असून, ते पूर्ण करण्यासाठी प्रयत्नशील राहू, असे लक्ष्मी हेब्बाळकर यांनी सांगितले.
जनतेने कोणतेही काम आपल्या निदर्शनास आणून दिल्यास ते पूर्ण करण्यासाठी शक्य ते सर्व प्रयत्न करणार आहे. जनतेचे प्रेम, विश्वास आणि सहकार्य हीच माझी ताकद असून, मी सदैव आपल्या सोबत राहीन, अशी ग्वाही त्यांनी दिली.
कार्यक्रमाला श्री सिद्धलिंग शिवाचार्य स्वामीजी, परमपूज्य श्री बसवराज देवरा, बृहन्मठ होन्निहाळ, कृष्ण तेनगी, बसनगौडा पाटील, नागेश देसाई, रवी मठद, भरमा कटबुगोळ, नागाप्पा कटबुगोळ, सुरेश नावी, महाबळेश्वर गुडकट्टी यांच्यासह मान्यवर, भाविक आणि ग्रामस्थ मोठ्या संख्येने उपस्थित होते.
श्री महागणपती प्राणप्रतिष्ठापना तसेच विविध धार्मिक विधी भक्तिभावाने पार पडले. या सोहळ्यासाठी परिसरातील भाविकांनी मोठ्या संख्येने उपस्थित राहून श्री महागणपतीचे दर्शन घेतले.




