Latest

ವಿಟಿಯು ಅತಿಥಿಗೃಹದಲ್ಲಿ ಶಾಸಕರೊಂದಿಗೆ ಸಿಎಂ ಚರ್ಚೆ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಬೆಳಗಾವಿಯ ವಿಧಾನಮಂಡಳದ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ವಿಟಿಯು ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಮುಂಜಾನೆ ಶಾಸಕರೊಂದಿಗೆ ಚರ್ಚಿಸಿದರು. 

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಹಾಗೂ ಶಾಸಕರಾದ ಬಿ.ಸಿ.ಪಾಟೀಲ ಮತ್ತು ಆನಂದ ಸಿಂಗ್ ಅವರೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಿದರು. 

ಈ ಮಧ್ಯೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. 

ಶಾಲಾ ಮಕ್ಕಳೊಂದಿಗೆ ಫೋಟೊ:

ವಿಟಿಯು ಕ್ಯಾಂಪಸ್ ನಲ್ಲಿ ಬುಧವಾರ ಬೆಳಗ್ಗೆಯೂ ವಾಕಿಂಗ್ ಮಾಡಿದ ಕುಮಾರಸ್ವಾಮಿ ಈ ವೇಳೆ ಅಲ್ಲಿಗೆ ಬಂದಿದ್ದ ಕೆಲವು ಶಾಲ ಮಕ್ಕಳೊಂದಿಗೆ ಫೋಟೋಕ್ಕೆ ಫೋಸ್ ನೀಡಿದರು. 

Related Articles

Back to top button