ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಆಡಿಯೋ ಪ್ರಕರಣ ಕುರಿತು ವಿಶೇಷ ತನಿಖಾ ದಳದಿಂದ (ಎಸ್ಐಟಿ) ತನಿಖೆ ನಡೆಸುವಂತೆ ಸ್ಪೀಕರ್ ರಮಶ ಕುಮಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸೂಚಿಸಿದ್ದಾರೆ.
ಸೋಮವಾರ ಸದನದಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ರಮೇಶ ಕುಮಾರ ಈ ಸೂಚನೆ ನೀಡಿ, 15 ದಿನದೊಳಗಾಗಿ ತಮ್ಮ ಮೇಲೆ ಬಂದಿರುವ ಆರೋಪದಿಂದ ಮುಕ್ತಗೊಳಿಸುವಂತೆ ಕೋರಿದರು.
50 ಕೋಟಿ ರೂ. ಆರೋಪ: ನೊಂದು ಕಣ್ಣೀರು ಹಾಕಿದ ಸ್ಪೀಕರ್
ಆದರೆ ಇದಕ್ಕೆ ಆಕ್ಷೇಪವೆತ್ತಿದ ಬಿಜೆಪಿ, ಸ್ಪೀಕರ್ ಮೇಲೆ ನಮಗೆಲ್ಲ ವಿಶ್ವಾಸವಿದೆ. ಅವರು ಈ ಆರೋಪದಿಂದ ಹೊರಗೆ ಬರಬೇಕು. ಆದರೆ ಈ ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಹಾಗಾಗಿ ಸ್ಪೀಕರ್ ಅವರೇ ಸೂಕ್ತವಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿತು.
ಗುರುಮಿಠಕಲ್ ಶಾಸಕರ ಮಗನೊಂದಿಗೆ ಡೀಲ್ ಯತ್ನ: ಆಡಿಯೋ ರಿಲೀಸ್
ಸರ್ಕಾರವೇ ಈ ಆಡಿಯೋ ಕ್ಲಿಪ್ನಲ್ಲಿ ಭಾಗಿಯಾಗಿದೆ, ಹೀಗಿರುವಾಗ ಸರ್ಕಾರವೇ ರಚಿಸುವ ತನಿಖಾ ಸಂಸ್ಥೆ ತನಿಖೆಯನ್ನು ಹೇಗೆ ನಂಬುವುದು. ಅದು ವಿಶ್ವಾಸಾರ್ಹವಾಗಲಾರದು. ಅಲ್ಲದೆ, ಈಗ ಸ್ಪೀಕರ್ ವಿರುದ್ಧ ಕೆಳಿಬಂದ 50 ಕೋಟಿ ರೂ. ಲಂಚ ಆರೋಪದ ಪ್ರಕರಣ ಮಾತ್ರ ಚರ್ಚೆಯಾಗಲಿ. ಉಳಿದ ಸಂಗತಿ ಪ್ರತ್ಯೇಕವಾಗಿ ಚರ್ಚೆಗೆ ಬರಲಿ ಎಂದು ಬಿಜೆಪಿಯ ಜಗದೀಶ ಶೆಟ್ಟರ್, ಮಾದು ಸ್ವಾಮಿ, ಗೋವಿಂದ ಕಾರಜೋಳ ಮತ್ತಿತರರು ಹೇಳಿದರು.
ಆಡಿಯೋ ಎಲ್ಲ ನಕಲಿ, ನಾನು ಯಾರೊಂದಿಗೂ ಮಾತನಾಡಿಲ್ಲ ಎಂದ ಯಡಿಯೂರಪ್ಪ
ಇದಕ್ಕೆ ಒಪ್ಪದ ರಮೇಶ ಕುಮಾರ ನನ್ನ ಮೇಲೆಯೇ ಆರೋಪ ಬಂದಿರುವುದರಿಂದ ನಾನು ತನಿಖೆ ಆದೇಶಿಸಿಲು ಸಾಧ್ಯವಿಲ್ಲ. ಸರಕಾರ ಸಂವಿಧಾನ ಬದ್ದವಾಗಿ ಆಯ್ಕೆಯಾಗಿರುವಂತದ್ದು. ಹಾಗಾಗಿ ಸೂಕ್ತವಾಗಿ ತನಿಖೆ ನಡೆಸುತ್ತದೆ. ಇದರ ಸಂಬಂಧ ಯಾರಿಗಾದರೂ ಅಸಮಾಧಾನವಿದ್ದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದೇ ಇರುತ್ತದೆ ಎಂದರು.
ಅಂತಿಮವಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ, ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದರು.
ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಯಡಿಯೂರಪ್ಪ
ತಾವೇ ತನಿಖಾ ತಂಡ ನೇಮಿಸಿ. ಸರ್ಕಾರ ನಡೆಸುವ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ ಎಂದು ಬಿಜೆಪಿಯ ಮಾಧುಸ್ವಾಮಿ ಸ್ಪೀಕರ್ ಅವರನ್ನು ಒತ್ತಾಯಿಸಿದರು. ಸರ್ಕಾರವನ್ನು ವಿರೋಧಿಸಲು ಘಟನೆ ನಡೆದ ದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ನಾನೇ ಇದನ್ನು ಮಾಡಿಸಿದ್ದೇನೆ ಎಂದು. ಆ ಕಾರಣದಿಂದ ಪ್ರತ್ಯೇಕ ತನಿಖೆ ನಡೆಯಲಿ ಎಂದು ಮಾಧುಸ್ವಾಮಿ ಹೇಳಿದರು.
ಎಲ್ಲ ಸತ್ಯ ರಾಜ್ಯದ ಜನತೆಗೆ ಗೊತ್ತಾಗಲಿ. ಆಡಿಯೋದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಯಾರು ಯಾರ ಬಗ್ಗೆ ಬೇಕಾದರೂ ಲಘುವಾಗಿ, ಅವಹೇಳನಕಾರಿಯಾಗಿ ಮಾತನಾಡಬಹುದು. ಅಪ್ರಾಮಾಣಿಕ ಎಂದು ಧಾರಾಳವಾಗಿ ಮಾತನಾಡಬಹುದು ಎಂಬುದು ಅಂತ್ಯವಾಗಬೇಕು. ಸಮಗ್ರ ತನಿಖೆ ಆಗಬೇಕು. ಶಿಕ್ಷೆ ಆಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ದಿನೇಶ ಗುಂಡೂರಾವ್, ಸಾರಾ ಮಹೇಶ ಮೊದಲಾದವರು ಸಹ ಮಾತನಾಡಿ ಸಮಗ್ರ ತನಿಖೆಗೆ ಆಗ್ರಹಿಸಿದರು.
ಎಲ್ಲ ಸರ್ಕಾರಗಳೂ ಸಂವಿಧಾನಬದ್ಧವಾಗಿ ಸ್ಥಾಪಿವಾಗಿರಬೇಕು. ಸಂವಿಧಾನಬದ್ಧವಾಗಿ ಸ್ಥಾಪಿತವಾಗದ ಸರ್ಕಾರವನ್ನು ಪಾಲಿಸಬಾರದು. ಸರ್ಕಾರದ ಎಲ್ಲ ಅಧಿಕಾರಿಗಳೂ ಹೇಳಿದಂತೆ ಕೇಳುವವರಾ? ನಾಳೆ ನೀವು ಅಧಿಕಾರಕ್ಕೆ ಬಂದಾಗ ನೀವು ಹೇಳಿದಂತೆ ಅವರು ಕೇಳುತ್ತಾರಾ? ನಾನು ರೂಲಿಂಗ್ ಮಾಡುತ್ತೇನೆ. ಎಸ್ಐಟಿ ತನಿಖೆ ನಡೆಯಲಿ ಎಂದು ರಮೇಶ್ ಕುಮಾರ್ ಹೇಳಿ, ಸದನವನ್ನು 3 ಗಂಟೆಗೆ ಮುಂದೂಡಿದರು.