Latest

ಹೃದಯಾಘಾತದಿಂದ ಕಾನಸ್ಟೆಬಲ್ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಶಹಾಪುರ ಪೊಲೀಸ್ ಠಾಣೆ ಕಾನಸ್ಟೆಬಲ್ ದುಂಡಯ್ಯ ಮುನವಳ್ಳಿಮಠ (37) ಹೃದಯಾಘಾತದಿಂದ ನಿಧನರಾದರು.

Home add -Advt

ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ದುಂಡಯ್ಯ ಶಿವಲಿಂಗಯ್ಯ ಮುನ್ನವಳ್ಳಿಮಠ ಬುಧವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದರು. ಇಂದು ಮಧ್ಯಾಹ್ನ ಅವರು ಕರ್ತವ್ಯಕ್ಕೆ ತೆರಳಬೇಕಿತ್ತು.

ಕಳೆದ ಎರಡು ವರ್ಷಗಳಿಂದ ಪೇದೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ತಂದೆ-ತಾಯಿ, ಐವರು ಸಹೋದರಿಯರು ಇದ್ದಾರೆ.

Related Articles

Back to top button