Kannada NewsKarnataka NewsLatest

*ಚಿರತೆ ದಾಳಿ: 21 ಕುರಿಗಳನ್ನು ಕೊಂದು ಎರಡು ಕುರಿ ಹೊತ್ತೊಯ್ದ ಚೀತಾ*

ಪ್ರಗತಿವಾಹಿನಿ ಸುದ್ದಿ: ಹೊಲದಲ್ಲಿ ಚಿರತೆ ದಾಳಿ ನಡೆಸಿ 21 ಕುರಿಗಳನ್ನು ಕೊಂದು ಎರಡು ಕುರಿಗಳನ್ನು ಹೊತ್ತೊಯ್ದ ಘಟನೆ ಬಳ್ಳಾರಿ ಜಿಲ್ಲೆಯ ಸಂಜೀವತಾಯನಕೋಟೆ ಗ್ರಾಮದಲ್ಲಿ ನಡೆದಿದೆ.

ತಡರಾತ್ರಿ ಹೊಲಕ್ಕೆ ನುಗ್ಗಿದ ಚಿರತೆ 21 ಕುರಿಗಳನ್ನು ಸಾಯಿಸಿದೆ. 2 ಕುರಿಗಳನ್ನು ಹೊತ್ತೊಯ್ದಿದೆ. ರೈತ ಸಣ್ಣತಿಮ್ಮಪ್ಪ ಎಂಬುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button