Latest

*ಕೋವಿಡ್ ವಿಪತ್ತು ನಿರ್ವಹಣಾ ಸಭೆ ದಿಢೀರ್ ರದ್ದು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೋಪಾಂತರಿ BF.7 ವ್ಯಾಪಕವಾಗಿ ಹರಡುವ ಭೀತಿ ಹಿನ್ನೆಲೆಯಲ್ಲಿ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಕರೆಯಲಾಗಿದ್ದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ದಿಢೀರ್ ರದ್ದುಗೊಂಡಿದೆ.

ಕೋವಿಡ್ ತಡೆಗಟ್ಟಲು ಮುಂಜಾಗೃತಾ ಕ್ರ ಹಾಗೂ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು. ಆದರೆ ಇಂದಿನ ಸಭೆ ರದ್ದುಗೊಂಡಿದ್ದು, ಮುಂದೂಡಲಾಗಿದೆ.

Home add -Advt

ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದು, ಇಂದು ನಡೆಯಬೇಕಿದ್ದ ಕೋವಿಡ್ ಸಭೆ ರದ್ದಾಗಿದ್ದು ಸಭೆಯನ್ನು ಸೋಮವಾರ ನಡೆಸಲು ನಿರ್ಧರಿಸಲಾಗಿದೆ. ಇಂದು ಸರ್ಕಾರಿ ರಜೆ, ವಿಪತ್ತು ನಿರ್ವಹಣಾ ಬಹುತೇಕ ಅಧಿಕಾರಿಗಳು ಬೆಳಗಾವಿ ಅಧಿವೇಶನದಲ್ಲಿದ್ದಾರೆ. ಆರೋಗ್ಯ ಸಚಿವ ಡಾ.ಸುಧಾಕರ್ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಹಾಗಾಗಿ ಇಂದಿನ ಸಭೆ ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

*COVID Alert: ಶಾಲೆಗಳಿಗೆ ಗೈಡ್ ಲೈನ್ ಪ್ರಕಟ*

https://pragati.taskdun.com/private-schoolguidlinecovid-casebf-7/

 

Related Articles

Back to top button