Kannada NewsKarnataka News

ಮನೆಗಳ್ಳರ ಬಂಧನ; 1.35 ಲಕ್ಷ ರೂ ಮೌಲ್ಯದ ಆಭರಣ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಿಲಕವಾಡಿ ಪೊಲೀಸರು ಮನೆಗಳ್ಳರನ್ನು ಬಂಧಿಸಿ 1.35 ಲಕ್ಷ ರೂ. ಮೌಲ್ಯದ
ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ:೨೦/೦೩/೨೦೨೩ ರಂದು ತಿಲಕವಾಡಿ ಠಾಣಾ ವ್ಯಾಪ್ತಿಯ ಆದರ್ಶ ನಗರದಲ್ಲಿರುವ
ರಮೇಶ ಮಗದುಮ್ ರವರ ಮನೆಯಲ್ಲಿಟ್ಟ ಸುಮಾರು ೧,೩೫,೦೦೦/- ಮೌಲ್ಯದ ೩೦
ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳುವು ಮಾಡಿಕೊಂಡು ಹೋದ ಬಗ್ಗೆ ನೀಡಿದ
ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು .
ಪೊಲೀಸ್ ಇನಸ್ಪೆಕ್ಟರ್ ದಯಾನಂದ ಶೇಗುಣಸಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ,
ವಿಶಾಲ ಆನಂದ ಮಾನೆ, (೩೩) (ಸಾ||ಸಂತಮೀರಾ ಕಾಲೋನಿ ಅನಗೋಳ) ಮತ್ತು ಈರಣ್ಣಾ ಬಸಪ್ಪ ನಾವಿ, (೨೪), (ಸಾ: ೧ನೇ ಕಾ ಸ್, ಭಾಗ್ಯನಗರ, ಬೆಳಗಾವಿ) ಇವರನ್ನು ಬಂಧಿಸಿದೆ.
ಅವರಿಂದ ರೂ.೧,೩೫,೦೦೦/- ಮೌಲ್ಯದ ೩೦ ಗ್ರಾಂ ಬಂಗಾರದ ಆಭರಣಗಳನ್ನು ಜಪ್ತ್ ಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು , ತನಿಖೆ ಮುಂದುವರೆಸಲಾಗಿದೆ.

https://pragati.taskdun.com/huge-amount-of-cash-sewing-machine-cooler-etc-seized-in-belgavi-district/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button