Belagavi NewsBelgaum NewsKannada NewsKarnataka News

*ಖಾಸಗಿ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಸವದತ್ತಿ ತಾಲೂಕಿನ ಹಿಟ್ಟಣಗಿ ಹಾಗೂ ಏಣಗಿ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ನವರು ಸಾಲ ಪಡೆದ ಜನರಿಗೆ ಕಿರುಕುಳ ನೀಡುತ್ತಿದ್ದು, ಕಿರುಕುಳ ನೀಡುವ ಪೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಇಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಕರ್ನಾಟಕ ಬಹುಜನ ಚಳುವಣಿ ಸಂಘದಿಂದ ಮನವಿ ಸಲ್ಲಿಸಲಾಯಿತು.
ವಿವಿಧ ಖಾಸಗಿ ಪೈನಾನ್ಸ್ ನವರು ಹಿಟ್ಟಣಗಿ, ಏಣಗಿ ಈ ಗ್ರಾಮಗಳ ಜನರಿಗೆ ಸಾಲವನ್ನು ನೀಡಿದ್ದಾರೆ. ಈಗ ಮಳೆಗಾಲ ಇರುವುದರಿಂದ ಜನರಿಗೆ ಕೆಲಸ ಇರುವುದಿಲ್ಲ. ಜನರು ತೊಂದರೆಯಲ್ಲಿದ್ದಾರೆ. ಈಗ ಜನ ಒಂದು ಹೊತ್ತು ಊಟಕ್ಕೂ ಕೂಡಾ ಕಷ್ಟ ಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನರು ಹಣ ಮರು ಪಾವತಿ ಮಾಡು ಅಂದರೆ ಹೇಗೆ ಮಾಡುತ್ತಾರೆ? ಫೈನಾನ್ಸ್ ನವರ ಕೀರುಕುಳಕ್ಕೆ ಬೆಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹಾಗಾಗಿ ತಕ್ಷಣ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button