Karnataka News
*ಶಾಲೆಯ ಆವರಣದಲ್ಲೇ ನವಜಾತ ಶಿಶುವಿನ ಮೃತದೇಹ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಶಾಲೆಯ ಆವರಣದಲ್ಲಿಯೇ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವೆಂಕಟೇಶ್ವರ ಶಾಲೆ ಬಳಿ ನಡೆದಿದೆ.
ಅರೆಬರೆ ಹೂತಿಟ್ಟಿದ್ದ ಶಿಶುವಿನ ಮೃತದೇಹ ಶಾಲೆ ಆವರಣದಲ್ಲಿ ಪತ್ತೆಯಾಗಿದೆ. ಇದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಅರ್ಧದೇಹಮಾತ್ರ ಪತ್ತೆಯಾಗಿದ್ದು, ನಾಯಿಗಳು ಕಚ್ಚಿ ಎಳೆದಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.




