Belagavi NewsBelgaum NewsKannada NewsKarnataka NewsLatest
*ಜಂಗೀ ನಿಖಾಲಿ ಕುಸ್ತಿಗೆ ಚಾಲನೆ ನೀಡಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹಿರೇಬಾಗೇವಾಡಿಯಲ್ಲಿ ಆಯೋಜಿಸಲಾಗಿರುವ ಜಂಗೀ ನಿಖಾಲಿ ಕುಸ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು.

ಗ್ರಾಮದಲ್ಲಿ ಬಡೇಕೊಳ್ಳಮಠದ ಶ್ರೀ ಸದ್ಗುರು ನಾಗೇಂದ್ರ ಸ್ವಾಮಿಗಳ ಭಕ್ತರ ನೇತೃತ್ವದಲ್ಲಿ ಭಾರೀ ಜಂಗೀ ನಿಖಾಲಿ ಕುಸ್ತಿ ಆಯೋಜಿಸಲಾಗಿದೆ.
ಸ್ಪರ್ಧೆಗೆ ಚಾಲನೆ ನೀಡಿ ಚನ್ನರಾಜ ಹಟ್ಟಿಹೊಳಿ, ಕುಸ್ತಿಪಟುಗಳಿಗೆ ಶುಭ ಹಾರೈಸಿದರು.
ಈ ವೇಳೆ ಶ್ರೀ ಸದ್ಗುರು ನಾಗೇಂದ್ರ ಸ್ವಾಮಿಗಳು, ಗ್ರಾಮದ ಹಿರಿಯರು, ಭಕ್ತಾಧಿಗಳು, ಉಪಸ್ಥಿತರಿದ್ದರು.



