Kannada NewsKarnataka NewsLatest

*22 ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಐಪಿಎಸ್ ದರ್ಜೆಯಲ್ಲದ್ದ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಧೀಕ್ಷಕ ಸ್ಥಾನಕ್ಕೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. 

ಸುದೀರ್ಘ ಕಾಲದಿಂದ ಒಂದೇ ಹಂತದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಿಗೆ ಈ ನಿರ್ಧಾರ ವೃತ್ತಿಜೀವನದ ಪ್ರಮುಖ ತಿರುವು ನೀಡಿದೆ.

Home add -Advt

ಈ ಹಿಂದೆ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಗಳಲ್ಲಿ ಉಂಟಾಗಿದ್ದ ತಾಂತ್ರಿಕ ಅಡೆತಡೆಗಳಿಂದಾಗಿ ಅನೇಕ ಅರ್ಹ ಅಧಿಕಾರಿಗಳ ಪದೋನ್ನತಿ ಬಾಕಿ ಉಳಿದಿತ್ತು. ಈಗ ಗೃಹ ಇಲಾಖೆಯು ಇಲಾಖಾ ಮಂಡಳಿಯ ಶಿಫಾರಸಿನ ಮೇರೆಗೆ ಪಟ್ಟಿಯನ್ನು ಸಿದ್ಧಪಡಿಸಿ, ಖಾಲಿ ಇರುವ ಆಯಕಟ್ಟಿನ ಜಾಗಗಳಿಗೆ ಇವರನ್ನು ನಿಯೋಜಿಸಿದೆ. 

ಅರ್ಹತೆ ಮತ್ತು ಜೇಷ್ಠತೆಯ ಆಧಾರದ ಮೇಲೆ ಒಟ್ಟು 22 ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳಿಗೆ ಎಸ್‌ಪಿ (ನಾನಾ-ಐಪಿಎಸ್) ಆಗಿ ಬಡ್ತಿ ನೀಡಲಾಗಿದ್ದು ಇದು ಇಲಾಖೆಯ ಇತಿಹಾಸದಲ್ಲೇ ದೊಡ್ಡ ಮಟ್ಟದ ಶ್ರೇಣಿ ಸುಧಾರಣೆಯಾಗಿದೆ. 

ಈ ಕ್ರಮವು ಕೆಳಹಂತದ ಅಧಿಕಾರಿಗಳಲ್ಲಿ ಕಾರ್ಯೋತ್ಸಾಹ ಹೆಚ್ಚಿಸುವುದಲ್ಲದೆ, ಪೊಲೀಸ್ ವ್ಯವಸ್ಥೆಯಲ್ಲಿನ ಆಡಳಿತಾತ್ಮಕ ವಿಳಂಬಕ್ಕೆ ಮುಕ್ತಿ ಹಾಡಲಿದೆ.

ಇದರಿಂದ ಜಿಲ್ಲಾ ಮಟ್ಟದ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಅನುಭವಿ ಅಧಿಕಾರಿಗಳ ಸೇವೆ ಲಭ್ಯವಾಗಲಿದೆ.

Related Articles

Back to top button