Belagavi NewsBelgaum NewsKarnataka News

*ರಾಜಾ ಗಣೇಶ ಮೂರ್ತಿ ಆಗಮನ: ಬೆಳಗಾವಿಯಲ್ಲಿ ಈಗಿನಿಂದಲೇ ಆರಂಭವಾಗಿದೆ ಗಣೇಶ ಹಬ್ಬದ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ: ಕುಂದಾನಗರಿ ಬೆಳಗಾವಿಯಲ್ಲಿ ಹತ್ತು ದಿನಗಳಿಗೂ ಮೊದಲೇ ಗಣೇಶ ಹಬ್ಬದ ಸಂಭ್ರೆಅಮ-ಸಡಗರ ಆರಂಭವಾಗಿದೆ. ಬೆಳಗಾವಿ ನಗರದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲೆಡೆ ಭಕ್ತಿ, ಉತ್ಸಾಹ ಮನೆ ಮಾಡಿದೆ.

ಬೆಳಗಾವಿಯ ಪ್ರಮುಖ ಆಕರ್ಷಣೆಯಾದ ರಾಜಾ ಗಣೇಶ ಮೂರ್ತಿಯ ಆಗಮನವು ಚವಾಟ್ ಗಲ್ಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಈ “ಆಗಮನ ಸೋಳಾ” (ಆಗಮನ ಮೆರವಣಿಗೆ) ಕೇವಲ ಚವಾಟ್ ಗಲ್ಲಿಗೆ ಮಾತ್ರ ಸೀಮಿತವಾಗಿರದೆ, ಇಡೀ ಬೆಳಗಾವಿ ನಗರದ ಗೋವಾವೇಸ್, ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಸಾಗಿತು.

Home add -Advt

ಸಾವಿರಾರು ಭಕ್ತರು ರಾಜಾ ಗಣೇಶನನ್ನು ಭಕ್ತಿ ಭಾವದಿಂದ ಸ್ವಾಗತಿಸಿ, ಆಶೀರ್ವಾದ ಪಡೆದರು. ಈ ಬಾರಿಯ ಗಣೇಶೋತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ಹಾಗೂ ನಗರ ಸಜ್ಜಾಗಿದೆ.

Related Articles

Back to top button