
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾನುವಾರ ಸುರಿದ ಮಳೆಯಿಂದಾಗಿ ಕಮಕಾರಟ್ಟಿ ಗ್ರಾಮದಲ್ಲಿ ನೆಲಗೋಡೆ ಕುಸಿತಕೊಂಡು ಮೃತಪಟ್ಟಿರುವ ಇಬ್ಬರ ಕುಟುಂಬಗಳನ್ನು ಇಂದು ಭೇಟಿ ಮಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ ಹೇಳುವ ಜೊತೆಗೆ ಧನಸಹಾಯ ಮಾಡಿದರು.

ಕಲ್ಲಪ್ಪ ಸಿ ಸಾಂಬ್ರೆಕರ್ (ಕೊಂಡಸಕೊಪ್ಪ ನಿವಾಸಿ, 45 ವರ್ಷ) ಹಾಗೂ ಪರಶುರಾಮ ಗ ಶಹಪೂರಕರ್ (ಶಿಂದೋಳಿ ನಿವಾಸಿ, 17 ವರ್ಷ ) ಆಡುಗಳನ್ನು ಮೇಯಿಸುವ ಸಲುವಾಗಿ ಕಮಕಾರಟ್ಟಿ ಹೋಗಿದ್ದರು.
ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸುರಿದ ಭಾರಿ ಮಳೆಯಿಂದಾಗಿ ಆಸರೆ ಬಯಸಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಲದಲ್ಲಿನ ಶೆಡ್ ಹತ್ತಿರ ಹೋಗಿದ್ದಾರೆ. ಮಣ್ಣು ನಿರ್ಮಿತ ಗೋಡೆ ಇವರ ಮೇಲೆ ಕುಸಿದು ಬಿದ್ದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ.

ಹಿರೇಬಾಗೇವಾಡಿ ತಹಸಿಲ್ದಾರ ಕುಲಕರ್ಣಿ ಹಾಗೂ ಸಿಪಿಐ ಅಂಬಿಗೇರ್ ಇದ್ದರು.