Kannada NewsKarnataka NewsLatest

ಅಕಾಲಿಕ ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಹೆಬ್ಬಾಳಕರ್ ಸಾಂತ್ವನ, ಧನಸಹಾಯ

​ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ​ಭಾನುವಾರ ಸುರಿದ ಮಳೆಯಿಂದಾಗಿ ಕಮಕಾರಟ್ಟಿ ಗ್ರಾಮದಲ್ಲಿ ನೆಲಗೋಡೆ ಕುಸಿತಕೊಂಡು ಮೃತಪಟ್ಟಿರುವ ಇಬ್ಬರ ಕುಟುಂಬಗಳನ್ನು ಇಂದು ಭೇಟಿ ಮಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ ಹೇಳುವ ಜೊತೆಗೆ ಧನಸಹಾಯ ಮಾಡಿದರು.

 ಕಲ್ಲಪ್ಪ ಸಿ ಸಾಂಬ್ರೆಕರ್ (ಕೊಂಡಸಕೊಪ್ಪ ನಿವಾಸಿ, 45 ವರ್ಷ) ಹಾಗೂ ಪರಶುರಾಮ ಗ ಶಹಪೂರಕರ್ (ಶಿಂದೋಳಿ ನಿವಾಸಿ,  17 ವರ್ಷ )   ಆಡುಗಳನ್ನು ಮೇಯಿಸುವ ಸಲುವಾಗಿ ಕಮಕಾರಟ್ಟಿ ಹೋಗಿದ್ದರು.
ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸುರಿದ ಭಾರಿ ಮಳೆಯಿಂದಾಗಿ ಆಸರೆ ಬಯಸಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಲದಲ್ಲಿನ ಶೆಡ್ ಹತ್ತಿರ ಹೋಗಿದ್ದಾರೆ​.​ ಮಣ್ಣು ನಿರ್ಮಿತ ಗೋಡೆ ಇವರ ಮೇಲೆ ಕುಸಿದು  ಬಿದ್ದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ.
​ಸುದ್ದಿ ತಿಳಿದ ಲಕ್ಷ್ಮಿ ಹೆಬ್ಬಾಳಕರ್​ ಮೃತರ​ ಮನೆಗಳಿಗೆ ತೆರಳಿ,​ ಕುಟುಂಬಗಳಿಗೆ ಸಾಂತ್ವನವನ್ನು ಹೇಳಿ ಧೈರ್ಯವನ್ನು ತುಂಬಿ​ದರು. ಜೊತೆಗೆ  ಧನ ಸಹಾಯ​ವನ್ನೂ​ ಮಾಡಿ​ದರು. ಸರಕಾರದಿಂದ ಸಾಧ್ಯವಾದಷ್ಟು ಆರ್ಥಿಕ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. 
ಹಿರೇಬಾಗೇವಾಡಿ ತಹಸಿಲ್ದಾರ ಕುಲಕರ್ಣಿ ಹಾಗೂ ಸಿಪಿಐ ಅಂಬಿಗೇರ್ ಇದ್ದರು. 

Related Articles

Back to top button