Latest

ರಾಜ್ಯದಲ್ಲಿ ಇಂದು ಒಂದೇ ದಿನ ತ್ರಿಶತಕ ಬಾರಿಸಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ 308 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಹೊಸದಾಗಿ 308 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

Home add -Advt

ಕಲಬುರಗಿ 99, ಯಾದಗಿರಿಯಲ್ಲಿ 14 ಮಕ್ಕಳು ಸೇರಿ 66 ಜನರಲ್ಲಿ ಸೋಂಕು ಪತ್ತೆ, ಉಡುಪಿ 45, ಬೀದರ್ 48, ಬೆಂಗಳೂರು ನಗರ 18, ಗದಗ 6, ಬಳ್ಳಾರಿ 8, ಧಾರವಾಡ 4, ಬಾಗಲಕೋಟೆ 2, ಶಿವಮೊಗ್ಗ- 4, ಧಾರವಾಡ- 4, ಹಾಸನ- 3, ದಕ್ಷಿಣ ಕನ್ನಡ- 3, ಕೊಪ್ಪಳ- 1, ರಾಮನಗರ- 1 ಕೇಸ್ ಪತ್ತೆಯಾಗಿದೆ.

Related Articles

Back to top button