Kannada NewsLatest

ಸುವರ್ಣವಿಧಾನಸೌಧದಲ್ಲಿ ನಿರಂತರ ಚಟುವಟಿಕೆ ನಡೆಯುತ್ತಿರಲಿ ಹುಕ್ಕೇರಿ ಶ್ರೀಗಳ ಒತ್ತಾಸೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸುವರ್ಣ ವಿಧಾನಸೌಧ ಬೆಳಗಾವಿ ನಗರದಲ್ಲಿ ನಿರ್ಮಾಣಗೊಂಡು ಸಾಕಷ್ಟು ವರ್ಷಗಳು ಗತಿಸಿವೆ ವಿಧಾನಸಭಾ ಅಧಿವೇಶನಗಳು ವರ್ಷಕ್ಕೊಂದು ಸಾರಿ ನಡೆಯುತ್ತದೆ ಆಗಾಗ ಮಂತ್ರಿಮಹೋದಯರು ಬಂದುಹೋಗುತ್ತಿರುತ್ತಾರೆ ಆದರೆ ನಮ್ಮ ಆಸೆ ಅದು ನಿರಂತರ ಚಟುವಟಿಕೆಯ ಕೇಂದ್ರವಾಗಿ ಹೊರಹೊಮ್ಮಬೇಕು. ಈ ಭಾಗಕ್ಕೆ ಜನರಿಗೆ ಸ್ಪಂದಿಸುವ ಕಾರ್ಯ ಹೆಚ್ಚಾಗಬೇಕು ಎನ್ನುವುದು ನಮ್ಮ ಸದಿಚ್ಛೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.

ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರು ಶ್ರೀ ಮಠಕ್ಕೆ ಭೇಟಿ ನೀಡಿದಾಗ ಶ್ರೀಗಳು ಸನ್ಮಾನಿಸಿ ಕಿವಿಮಾತು ಹೇಳಿದರು. ಉತ್ತರ ಕರ್ನಾಟಕದ ಜನ ಬೆಂಗಳೂರಿಗೆ ಹೋಗಿ ಕೆಲಸ ಮಾಡಿಸಿಕೊಳ್ಳುವದಕ್ಕಿಂತ ಇಲ್ಲಿ ಮಂತ್ರಿಮಹೋದಯರು ಸುವರ್ಣವಿಧಾನಸೌಧದಲ್ಲಿ ಹೆಚ್ಚುಹೆಚ್ಚಾಗಿ ಬರಬೇಕು ಈ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ ಎಂದು ತಿಳಿಸಿದರು.

Home add -Advt

ಇದಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಉತ್ತರ ಕರ್ನಾಟಕದ ಜನರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸುತ್ತಾ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ ಎಲ್ಲರೂ ಸುವರ್ಣವಿಧಾನಸೌಧದಲ್ಲಿ ಹೆಚ್ಚುಹೆಚ್ಚಾಗಿ ಕಾರ್ಯಚಟುವಟಿಕೆ ನಡೆಯುವಂತೆ ನಾವೆಲ್ಲರೂ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇವೆ ನಾವು ಕೂಡ ಹೋಗಿ ಮುಖ್ಯಮಂತ್ರಿಗಳಿಗೆ ತಿಳಿಸಿ ಸುವರ್ಣ ವಿಧಾನಸೌಧ ನಿರಂತರ ಚಟುವಟಿಕೆಯಲ್ಲಿ ಇರುವಹಾಗೆ ಮಾಡುತ್ತೇವೆ ಹಾಗೆಯೇ ನಮ್ಮ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಉತ್ತರಕರ್ನಾಟಕದ ಕಾರ್ಯಕ್ರಮಗಳನ್ನು ಸುವರ್ಣವಿಧಾನಸೌಧದಲ್ಲಿ ಹೆಚ್ಚಾಗಿ ಮಾಡುತ್ತಿದ್ದಾರೆ ಇನ್ನು ಹೆಚ್ಚಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

Related Articles

Back to top button