Belagavi NewsBelgaum NewsKannada NewsKarnataka News

*ಸಾಲಬಾಧೆ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಟೋ ಚಾಲಕನೋರ್ವ ಬೆಳಗಾವಿ ನಗರದ ಕಿಲ್ಲಾ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ.‌

ಬುಧವಾರ ಮಧ್ಯಾಹ್ನ ಕಿಲ್ಲಾ ಕೋಟೆ ಕೆರೆಯಲ್ಲಿ ಬಿದ್ದು ಆಟೋ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದು, ಮೃತನನ್ನು ಬೆಳಗಾವಿ ನಗರದ ಕಂಗ್ರಾಳಿ ಗಲ್ಲಿ ನಿವಾಸಿ ಕಿರಣ ಎನ್ ಮಣಗುತ್ತಕರ್(45) ಎಂದು ಗುರುತಿಸಲಾಗಿದೆ. 

Home add -Advt

ಘಟನಾ ಸ್ಥಳಕ್ಕೆ ಮಾರ್ಕೆಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು.‌ ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button