Latest

3 ಕೋಟಿ ವಂಚನೆ; ಮಾಜಿ ಶಾಸಕ ಹಾಗೂ ಪತ್ನಿ ವಿರುದ್ಧ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆಗಾಗಿ ಮೂರು ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ನರಸಿಂಹಸ್ವಾಮಿ ಹಾಗೂ ಪತ್ನಿ ನಾಗಮಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪತ್ರಕರ್ತ ಸಂಗಮ್ ದೇವ್, ಮಾಜಿ ಶಾಸಕ ಹಾಗೂ ಅವರ ಪತ್ನಿ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

2018ರ ಚುನಾವಣೆ ವೇಳೆ ನರಸಿಂಹಸ್ವಾಮಿ 3 ಕೋಟಿ ರೂಪಾಯಿ ನಗದು ಸಾಲ ಪಡೆದಿದ್ದರು. ಚುನಾವಣೆ ಬಳಿಕ 85 ಲಕ್ಷ ರೂಪಾಯಿ ಹಣ ವಾಪಸ್ ನೀಡಿದ್ದರು. ಆದರೆ ಬಾಕಿ ಹಣ ನೀಡಿಲ್ಲ. ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಸಚಿವ ಆನಂದ್ ಸಿಂಗ್ ಭೇಟಿ ಬಳಿಕ ಸಿಎಂ ಬೊಮ್ಮಾಯಿ ಹೇಳಿದ್ದೇನು?

Related Articles

Back to top button