Belagavi NewsBelgaum NewsKannada NewsKarnataka News

*ಕೊಡಿ ಕೊಡಿ ಉದ್ಯೋಗ ಕೊಡಿ: ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಒಳಮಿಸಲಾತಿ ಜಾರಿ ಆಗುವರೆಗೆ ಯಾವುದೇ ಹುದ್ದೆಗಳ ಭರ್ತಿ ಮಾಡುವುದಿಲ್ಲ ಎಂದು ಆದೇಶ ಹೋರಡಿಸಿದ್ದು, ಇದರಿಂದ ಉದ್ಯೋಗ ನೀರಿಕ್ಷೆಯಲ್ಲಿದ್ದವರಿಗೆ ಶಾಕ್ ಆಗಿದೆ. ಹಾಗಾಗಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು‌‌.   

ಇಂದು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ‌ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೇರವಣಿಗೆ ನಡೆಸಿ  ಮನವಿ ಸಲ್ಲಿಸಿದರು.‌

Home add -Advt

ಈ ವೇಳೆ ಕೊಡಿ ಕೊಡಿ ಉದ್ಯೋಗ ಕೊಡಿ, ಯುವಕರಿಗೆ ಉದ್ಯೋಗ ನೀಡದೇ ವಂಚನೆ ಮಾಡ್ತಿರೋ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. 

ಒಳಮೀಸಲಾತಿ ಜಾರಿ ಮಾಡಬೇಕು, ಖಾಲಿ ಇರೋ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಮೋಸ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಕರೆದಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. 

Related Articles

Back to top button