LatestNationalSports

*ಪ್ಯಾರ ಒಲಂಪಿಕ್‌ ಪ್ರತಿಭೆಗಳಿಗೆ ಸೌಲಭ್ಯ ನೀಡಲು ಡೆಲಾಯ್ಡ್‌ ಇಂಡಿಯಾ, ಪ್ಯಾರಾಒಲಂಪಿಂಕ್‌ ಚಿನ್ನದ ವಿಜೇತೆ ಶೀತಲ್‌ ದೇವಿ ಅವರೊಂದಿಗೆ ಸಹಯೋಗ*

ಪ್ರಗತಿವಾಹಿನಿ ಸುದ್ದಿ: ಡೆಲಾಯ್ಟ್‌ ಇಂಡಿಯಾ ಪ್ಯಾರಾಒಲಂಪಿಕ್‌ನಲ್ಲಿ ಚಿನ್ನದಪದಕ ಪಡೆದ ಬಿಲ್ಲುಗಾರ್ತಿ ಶೀತಲ್ ದೇವಿ ಅವರೊಂದಿಗೆ ಪಾಲುದಾರಿಕೆ ಘೋಷಿಸಿದ್ದು, ಪ್ಯಾರಒಲಂಪಿಕ್‌ನಲ್ಲಿ ಭಾಗವಹಿಸಲು ಇಚ್ಚಿಸುವ ಹಾಗೂ ಅರ್ಹರ ಪ್ರತಿಭೆಗೆ ಬೆಂಬಲ ನೀಡಲು ಮುಂದಾಗಿದೆ.

Home add -Advt


ಈ ಕುರಿತು ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಮಲ್ ಶೆಟ್ಟಿ, 15 ನೇ ವಯಸ್ಸಿನಲ್ಲಿ ಬಿಲ್ಲು ಎತ್ತುವ ಮೂಲಕ ಶೀತಲ್‌ ತನ್ನ ಪ್ರತಿಭೆಯನ್ನು ಇಡೀ ಜಗತ್ತಿಗೆ ತಿಳಿಸಿದರು, 16 ನೇ ವಯಸ್ಸಿನಲ್ಲಿ ವಿಶ್ವದ ನಂ. 1 ಬಿಲ್ಲುಗಾರ್ತಿ ಆಗುವುದಷ್ಟೇ ಅಲ್ಲದೆ, 17 ನೇ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಮತ್ತು ಪ್ಯಾರಾಲಿಂಪಿಕ್ ಕಂಚಿನ ಪದಕವನ್ನು ಗಳಿಸಿದರು, ಇಂತಹ ಪ್ರತಿಭೆಗಳನ್ನು ಪೋಷಿಸಲು ಡೆಲಾಯ್ಟ್‌ ಇಂಡಿಯಾ ಅರ್ಹರಿಗೆ ಸಂಪೂರ್ಣ ಬೆಂಬಲ ನೀಡಲು ಮುಂದಾಗಿದೆ. ಭಾರತದ ಭವಿಷ್ಯವು ಇಂತಹ ಪ್ರತಿಭಾನ್ವಿತರ ಕೈಯಲ್ಲಿದ್ದು, ಇವರಿಗೆ ಬೇಕಾದ ಸವಲತ್ತು ಹಾಗೂ ಸೌಲಭ್ಯ ಒದಗಿಸಿದರೆ, ಪ್ರತಿಯೊಬ್ಬರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಿರೀಟವನ್ನು ಎತ್ತಿ ಹಿಡಿಯುತ್ತಾರೆ.


“ಭಾರತದ ದೊಡ್ಡ ಶಕ್ತಿ ಅದರ ಜನರಲ್ಲಿದೆ, ಅವರು ದೊಡ್ಡ ಕನಸು ಕಾಣುವ, ಸವಾಲುಗಳನ್ನು ಮೀರಿ ಮೇಲೇರುವ ಮತ್ತು ಸಾಧ್ಯತೆಗಳನ್ನು ಸಾಧನೆಗಳಾಗಿ ಪರಿವರ್ತಿಸುವ ಸಾಮರ್ಥ್ಯದಲ್ಲಿದೆ. ಸ್ಥಿತಿಸ್ಥಾಪಕತ್ವವು ಅವಕಾಶವನ್ನು ಪೂರೈಸಿದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಶೀತಲ್ ಅವರ ಪ್ರಯಾಣವು ಒಂದು ಉಜ್ವಲ ಉದಾಹರಣೆಯಾಗಿದೆ. ಡೆಲಾಯ್ಟ್ ಇಂಡಿಯಾದಲ್ಲಿ, ನಮ್ಮ ದೃಷ್ಟಿ ಭಾರತದ ಪ್ರಗತಿಯನ್ನು ವೀಕ್ಷಿಸುವುದಲ್ಲದೆ, ಅವಕಾಶಗಳನ್ನು ಸೃಷ್ಟಿಸುವ ಮೂಲಕ, ವೇದಿಕೆಗಳನ್ನು ನಿರ್ಮಿಸುವ ಮತ್ತು ಭಾರತದ ಪ್ರತಿಭೆ ಅಭಿವೃದ್ಧಿ ಹೊಂದಲು ಸರಿಯಾದ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೂಲಕ ಮಹಾನಗರಗಳನ್ನು ಮೀರಿ ಅದನ್ನು ಸಕ್ರಿಯವಾಗಿ ಸಕ್ರಿಯಗೊಳಿಸುವುದು ಎಂದರು”
ಬಿಲ್ಲುಗಾರ್ತಿ ಶೀತಲ್ ದೇವಿ ಮಾತನಾಡಿ, ನನ್ನಂತಹ ಹಲವು ಪ್ರತಿಭೆಗಳಿಗೆ ಡೆಲಾಯ್ಟ್‌ ಸೌಲಭ್ಯ ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಪ್ಯಾರಒಲಂಪಿಕ್‌ನಲ್ಲಿ ಭಾಗವಹಿಸಲು ಪ್ರತಿಭೆಗಳು ಮುಂದಾಗಬೇಕು, ಅಂತಹ ಪ್ರತಿಭೆಗಳನ್ನು ಹೊರತರುವ ಕೆಲಸ ಇಂತಹ ಸಂಸ್ಥೆಗಳಿಂದ ಸಾಧ್ಯ ಎಂದು ಹೇಳಿದರು.

Related Articles

Back to top button