Belagavi NewsBelgaum NewsKarnataka NewsPolitics

*ಗುರುದ್ವಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ*

 ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್ ಅವರ ಗುರುದ್ವಾರಕ್ಕೆ ಭೇಟಿ ನೀಡಿ, ಸಿಖ್‌ ಸಂಪ್ರದಾಯದಂತೆ ಪೂಜಾ ವಿಧಾನಗಳಲ್ಲಿ ಭಾಗವಹಿಸಿ, ಪ್ರಾರ್ಥನೆ ಸಲ್ಲಿಸಿದರು. 

ಇದೇ ವೇಳೆ ಗುರುದ್ವಾರದ ಸಾಮಾಜಿಕ ಸೇವೆಗಳ ಮಾಹಿತಿ ಪಡೆದ ಸಚಿವರು, ಅನ್ನಪ್ರಸಾದ ಸ್ವೀಕರಿಸಿದರು. ಗುರುದ್ವಾರದ ಮುಖ್ಯಸ್ಥರು ಸಚಿವರಿಗೆ ಪುಸ್ತಕ ನೀಡಿ  ಸನ್ಮಾನಿಸಿದರು. 

Home add -Advt

ಈ ವೇಳೆ ಮುಖಂಡರಾದ ಮಂತ್ವಿತ್ ಸಿಂಗ್ ಲವನಿತ್,  ಉದ್ಯಮಿಗಳಾದ ದೀಪಕ್ ವಾಲಿ, ವಿವೇಕ್ ವಾಲಿ,‌ ಸಚಿವರ ‌ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಡಿಡಿ ಶ್ರೀಧರ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button