Latest

9ನೇ ತರಗತಿ ವಿದ್ಯಾರ್ಥಿನಿ ಹಠಾತ್ ಸಾವು: ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ

ಪ್ರಗತಿವಾಹಿನಿ ಸುದ್ದಿ, ಮಂಗಳೂರು – 9ನೇ ತರಗತಿ ವಿದ್ಯಾರ್ಥಿನಿ ಹಠಾತ್ ಸಾವಿಗೀಡಾದ ಘಟನೆ ಬಂಟ್ವಾಳದ ಅಳಿಕೆಯಲ್ಲಿ ನಡೆದಿದೆ.

ಚಂದಾಡಿ ಗ್ರಾಮದ ಗೀತಾ ಹಾಗೂ ವಿನಯ ದಂಪತಿಯ ಪುತ್ರಿ ಅನ್ವಿತಾ ಹೆಗ್ಡೆ ಮೃತಪಟ್ಟಿದ್ದು, ಹೃದಯಾಘಾತ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

Home add -Advt

ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಓದುತ್ತಿದ್ದ ಅನ್ವಿತಾ ತಂದೆ- ತಾಯಿಗೆ ಒಬ್ಬಳೇ ಮಗಳಾಗಿದ್ದಳು. ಮಗಳನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ.

ಅನ್ವಿತಾ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಬಾಲಕಿ ಸಾವಿಗೆ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Related Articles

Back to top button