
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದ ಶ್ರೀ ಮಸಣಾಯಿ ಮಂದಿರದ ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 3 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ ಚೆಕ್ ನ್ನು ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸರಿತಾ ನಾಯಕ, ಸಂಗೀತಾ ಅಂಬೇಕರ್, ಸುಚಿತ್ ಸಾಂಬ್ರೇಕರ್, ಪುಂಡಲೀಕ ಬಾಂದುರ್ಗೆ, ಯಲ್ಲಪ್ಪ ಲೋಹಾರ, ದತ್ತು ಚೌಗುಲೆ, ಮಲ್ಲಪ್ಪ ತರಳೆ, ರಾಜು ಕೊಚೇರಿ, ವಿಕ್ರಂ ತರಳೆ, ಕುಲದೀಪ ತರಳೆ, ಮಿಲೀಂದ್ ಬಾತ್ಕಂಡೆ, ದೇವಸ್ಥಾನ ಕಮೀಟಿಯವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.