Kannada NewsLatest
ಓವರ್ ಬ್ರಿಡ್ಜ್ ಕೆಳಗೆ ಸಾರಾಯಿ ಮಾರಾಟ; ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಬೆಳಗಾವಿಯ ಕಪಿಲೇಶ್ವರ್ ಮಂದಿರದ ಓವರ್ ಬ್ರಿಡ್ಜ್ ಕೆಳಗೆ ನಡೆದಿದೆ.
ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಸುಮಾರು 26,136 ರೂಪಾಯಿ ಮೌಲ್ಯದ 66 ಲೀಟರ್ ಸಾರಾಯಿ ಹಾಗೂ 3,440ರೂಪಾಯಿಯನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬೆಳಗಾವಿ ನಗರ ಡಿಸಿಪಿ ಡಾ.ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಗೆ ಎದುರಾಯ್ತು ಸಂಕಷ್ಟ
ಕಾಶಿ ಜಗದ್ಗುರು ಪೀಠದಿಂದ ಪಿ.ಎಂ. ಕೇರ್ಸ್ ಫಂಡ್ಗೆ 5 ಲಕ್ಷ ರೂ. ದೇಣಿಗೆ




