Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿಗೆ ಆಗಮಿಸಿದ ಕೇಂದ್ರ ಸಚಿವ ಜೆಪಿ ನಡ್ಡಾ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯ 15 ನೇ ಘಟಿಕೋತ್ಸವದ ಮುಖ್ಯ ಬಾಷಣಕಾರರಾಗಿ ಕೇಂದ್ರ ಸಚಿವ ಜೆ.ಪಿ ನಡ್ಡಾ ಆಗಮಿಸಿದ್ದಾರೆ. 

ಬೆಳಗಾವಿಯ ಜೀರಗೆ ಸಭಾಭವನದಲ್ಲಿ‌ ಇಂದು ಘಟಿಕೋತ್ಸವ ನಡೆಯುತ್ತಿದೆ.‌ ಘಟಿಕೋತ್ಸವದ ಮುಖ್ಯ ಭಾಷಣವನ್ನು ಕೇಂದ್ರ ಸಚಿವ ಜೆ.ಪಿ ನಡ್ಡಾ ಮಾಡಲಿದ್ದಾರೆ.‌ ಮುಖ್ಯ ಅತಿಥಿಗಳಾಗಿ ಕೇಂದ್ರ ‌ಸಚಿವ ಪ್ರಹ್ಲಾದ ಜೋಶಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ವಹಿಸಿದ್ದಾರೆ.‌ ಮುಂಬೈ ಟಾಟಾ ಮೆಮೊರಿಯಲ್ ಕೇಂದ್ರದ ಡಿಡಿ ಡಾ. ಶೈಲೇಶ ಶ್ರೀಖಂಡೆಗೆ ಗೌರವ ಡಾಕ್ಟರೇಟ್ ಪ್ರಧಾನ ಆಗಲಿದೆ. 

1844 ವೈದ್ಯಕೀಯ ವಿದ್ಯಾರ್ಥಿಗಳಿ ಪದವಿ ಪ್ರಧಾನ, 40 ಪಿಎಚ್‌ಡಿ ಪ್ರಧಾನ ಹಾಗೂ 29 ಪೋಸ್ಟ್ ಡಾಕ್ಟರೇಟ್, 660 ಸ್ನಾತಕೋತ್ತರ ಪದವಿ, 1080 ಪದವಿ, 9 ಪಿಜಿ ಡಿಪ್ಲೋಮಾ, 11 ಡಿಪ್ಲೊಮಾ ಪದವಿ ಪ್ರಧಾನ ಆಗಲಿದೆ. 

Home add -Advt

Related Articles

Back to top button