Latest

*ಕಾಂಗ್ರೆಸ್ 136 ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ; ಕೃಷ್ಣಾ ನೀರಾವರಿ ಯೋಜನೆಗೆ 2 ಲಕ್ಷ ಕೋಟಿ ನೀಡುತ್ತೇವೆ; ಡಿ.ಕೆ.ಶಿವಕುಮಾರ್ ವಾಗ್ದಾನ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ‘ನಮ್ಮ ಭೂಮಿ ತಾಯಿಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ನಮ್ಮ ನಿಮ್ಮ ಸಾಷ್ಟಾಂಗ ನಮನ ಅರ್ಪಿಸೋಣ. ಇದೊಂದು ಪವಿತ್ರವಾದ ಸಭೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ನಿಮ್ಮ ಕೈ ಹಿಡಿದು, ನಿಮ್ಮ ಭೂಮಿಯಲ್ಲಿ ನೀರು ಹರಿಸಿ, ಹಸಿರು ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಜಯಪುರದಲ್ಲಿ ನಡೆದ ಕೃಷ್ಣಾ ಜನಾಂದೋಲನ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮೀಕ್ಷೆ ತಂಡದವರು ವಿಜಯಪುರದಲ್ಲಿ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಹೇಳಿದ್ದಾರೆ. ಉಳಿದ ಯಾವ ಎರಡು ಕ್ಷೇತ್ರಗಳಲ್ಲಿ ಹಿನ್ನಡೆಯಾಗಲಿದೆ ಎಂದು ನನಗೆ ಅನುಮಾನ. ಆದರೆ ನಿಮ್ಮ ಈ ಸ್ಫೂರ್ತಿ, ಅಭಿಮಾನ ನೋಡಿದರೆ ಈ ಜಿಲ್ಲೆಯಲ್ಲಿ 8 ಕ್ಕೆ 8 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಬಂದಿದೆ ಎಂದರು.

ನನಗೆ ಒಂದು ನಂಬಿಕೆ ಇದೆ. ನಾವೆಲ್ಲರೂ ಪವಿತ್ರವಾದ ಭೂಮಿಯಲ್ಲಿ ಇದ್ದೇವೆ. ಇದು ಬಸವಣ್ಣ, ಕನಕದಾಸರ, ಸಂತ ಶಿಶುನಾಳ ಶರೀಫರ, ಕುವೆಂಪು ಅವರ ಕರ್ನಾಟಕವಾಗಿ ಎಲ್ಲ ಜಾತಿ ಹಾಗೂ ಧರ್ಮಕ್ಕೂ ಸಮಬಾಳು ಸಮಪಾಲು ಸಿಗಬೇಕು. ಇದು ನಮ್ಮೆಲ್ಲರ ಆಸೆ. ಇಂದು ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಈ ಸಭೆ ಮೂಲಕ ನಮಗೆ ಶಕ್ತಿ ನೀಡಿದ್ದೀರಿ. ರಾಜ್ಯದ ಈ ಕೃಷ್ಣ ಯೋಜನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ಕೊಡುಗೆ ಕೊಟ್ಟರು. ಒಣಭೂಮಿಯಾಗಿದ್ದ ಈ ಭಾಗದ ಜಮೀನನ್ನು ಹಸಿರು ಭೂಮಿಯನ್ನಾಗಿ ಮಾಡಿದರು. ನಿಮನ್ನು ಶಕ್ತಿವಂತರನ್ನಾಗಿ, ಈ ರಾಜ್ಯದ ಆಸ್ತಿಯನ್ನಾಗಿ ಮಾಡಿದ್ದಾರೆ. ಬಹಳ ಮಂದಿ ತಮ್ಮ ಜಮೀನು ತ್ಯಾಗ ಮಾಡಿದ್ದೀರಿ. ಈ ದೇಶಕ್ಕೆ ನೀವು ಮಾಡಿರುವ ತ್ಯಾಗವನ್ನು ನಾವು ಮರೆಯಲು ಸಾಧ್ಯವಿಲ್ಲ. ಸರ್ಕಾರ ನೀಡಿರುವ ಹಣ ಕಡಿಮೆ ಇರಬಹುದು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 8 ವರ್ಷಗಳಲ್ಲಿ ಆಗಿರುವ ಅನ್ಯಾಯ ತಪ್ಪಿಸಿ. ಮುಂದೆ ಬರುವ ಕಾಂಗ್ರೆಸ್ ಸರ್ಕಾರ ನಿಮ್ಮ ಕೈ ಹಿಡಿದು, ನಿಮ್ಮ ಭೂಮಿಯಲ್ಲಿ ನೀರು ಹರಿಸಿ, ಹಸಿರು ಮಾಡುತ್ತದೆ ಎಂದು ಹೇಳಿದರು.

ರೈತರಿಗೆ ಸಂಬಳವಿಲ್ಲ. ಪ್ರಮೋಶನ್, ಪಿಂಚಣಿ, ಲಂಚ ಸಿಗುವುದಿಲ್ಲ. ಅದೇ ರೀತಿ ರೈತನಿಗೆ ನಿವೃತ್ತಿಯೂ ಇಲ್ಲ. ಈ ಸಮಾಜದ ಆಧಾರದಸ್ತಂಭ ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಕಾರ್ಮಿಕ. ಇವರಲ್ಲಿ ಒಬ್ಬರು ಇಲ್ಲದಿದ್ದರೂ ಈ ಸಮಾಜ ಬದುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಿಲ್ಲಲಿದೆ. ನಮಗೆ ಎಷ್ಟೇ ಕಷ್ಟವಾದರೂ ಮುಂದಿನ ದಿನಗಳಲ್ಲಿ 136 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದು, ಈ ಭಾಗದ ಕೃಷ್ಣಾ ನೀರಾವರಿ ಯೋಜನೆಗೆ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರು. ನೀಡುವುದಾಗಿ ವಾಗ್ದಾನ ಕೊಡಲು ಇಲ್ಲಿಗೆ ಬಂದಿದ್ದೇವೆ. ಇದು ನಮ್ಮ ಸಂಕಲ್ಪ. ನಾವು ನುಡಿದಂತೆ ನಡೆಯುತ್ತೇವೆ ಎಂದರು.

Home add -Advt

ನಮ್ಮ ಜೀವನ ಸಾರ್ಥಕವಾಗಬೇಕಾದರೆ, ನಾವು ಎಷ್ಟು ಸಂತೋಷವಾಗಿರುತ್ತೇವೆ ಎಂಬುದಕ್ಕಿಂತ ನಮ್ಮಿಂದ ಎಷ್ಟು ಜನ ಸಂತೋಷವಾಗಿರುತ್ತಾರೆ ಎಂಬುದು ಮುಖ್ಯ.ದೇವರು ವರವನ್ನು ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಆದರೆ ನಿಮಗೆ ಕೊಟ್ಟಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗಲೇ ಅಧಿಕಾರಕ್ಕೆ ಬಂದರೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿ ಅನುಸರಿಸಿದೆ.

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇಥಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುವ ಕಾರ್ಯಕ್ರಮ ರೂಪಿಸುತ್ತದೆ. ನಮ್ಮ ನಾಯಕರು ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅದಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ನೀವು ಇಷ್ಟು ಹೊತ್ತು ಕೂತಿದ್ದೀರಿ ಎಂದರೆ ನೀವು ಮತ ಹಾಕುವ ನಂಬಿಕೆ ಇದೆ. ನೀವು ಪ್ರತಿಯೊಬ್ಬರು ಐದು ಮತಗಳನ್ನು ಕಾಂಗ್ರೆಸ್ ಗೆ ಸಿಗುವಂತೆ ಮಾಡಬೇಕು.

ಈ ನಾಡು ಎಲ್ಲ ವರ್ಗಕ್ಕೆ ಸೇರಿದ ನಾಡು. ಜಾತಿ, ಧರ್ಮ ನಮಗೆ ಮುಖ್ಯವಲ್ಲ. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ಕೃಷಿಕನಿಗೆ ಯಾವ ಜಾತಿ ಧರ್ಮ ಇದೆ? ಇದೇ ಕಾಂಗ್ರೆಸ್ ಜಾತಿ ಹಾಗೂ ನೀತಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ನೀತಿ.

ಇಂದು ಜನ ಸಾಯುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿಗಳು ನಿಮ್ಮ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ನಿಮ್ಮ ಆದಾಯ ಡಬಲ್ ಆಯಿತಾ, ಖಾತೆಗೆ ಹಣ ಬಂತಾ? ನಿಮ್ಮ ಆದಾಯ ಪಾತಾಳಕ್ಕೆ ಹೋಗಿದೆ, ಬೆಲೆ ಗಗನಕ್ಕೇರಿದೆ. ರಸಗೊಬ್ಬರ, ಕೀಟ ನಾಶಕ ಮೇಲೆ ಜಿಎಸ್ಟಿ ಹಾಕಿ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. 440 ರೂ. ಇದ್ದ ಅಡುಗೆ ಅನಿಲ 1000 ಆಗಿದೆ. ಇದಕ್ಕೆಲ್ಲ ಉಪಾಯ ಎಂದರೆ, ನಿಮಗೆ ನಾವು ಶಕ್ತಿ ನೀಡಬೇಕು. ನಿಮ್ಮ ಮನೆ ಬಾಗಿಲಿಗೆ ಅವಕಾಶ ಬರುತ್ತಿದೆ ಎಮ್ದು ಹೇಳಿದರು.

ಬಿಜೆಪಿ ಸರ್ಕಾರ ಬಂದ ನಂತರ ನಿಮ್ಮ ಬದುಕಿನಲ್ಲಿ ಏನಾದರೂ ಅನುಕೂಲವಾಗಿದೆಯೇ? ಬರೀ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ಕಚೇರಿಗಳ ಗೋಡೆ ಮುಟ್ಟಿದರೆ ಕಾಸು, ಕಾಸು ಎನ್ನುತ್ತಿವೆ. 40% ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಈ ಸರಕಾರ ಯೋಜನೆ ಅಂದಾಜು ಮಾಡುವಾಗ 500 ಕೋಟಿ ರೂ ಇದ್ದರೆ ಅದಕ್ಕೆ 1 ಸಾವಿರ ಕೋಟಿ, 100 ಕೋಟಿಯನ್ನು 200 ಕೋಟಿ ಮಾಡುತ್ತದೆ. ಪ್ರತಿ ಅಂದಾಜು ಬಗ್ಗೆ ತನಿಖೆಗೆ ಆದೇಶ ಮಾಡಿ, ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಈಗಾಗಲೇ ಅಂದಾಜು ಸಮಿತಿ ವರದಿಯಲ್ಲಿ 40 ಕೋಟಿ ಕಡಿಮೆ ಮಾಡಿಸಿದೆ. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬೆಳಗಾವಿಯಲ್ಲಿ 300 ಕೋಟಿ ಯೋಜನೆಗೆ 800 ಕೋಟಿ ಅಂದಾಜು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಯೋಜನೆ ವಜಾ ಮಾಡಿದ್ದಾರೆ. ನಿಮ್ಮ ಯೋಜನೆಗಳನ್ನು ನಾವು ಬಿಡುತ್ತೇವಾ? ನಮ್ಮ ಜನರಿಗೆ ಕೊಟ್ಟ ತೊಂದರೆ ನೋಡಿಕೊಂಡು ಸುಮ್ಮನೆ ಕೂರುತ್ತೇವಾ? ಮುಂದಿನ ದಿನಗಳಲ್ಲಿ ನಿಮಗೆ ಉತ್ತರ ಸಿಗಲಿದೆ. ಈ ಭ್ರಷ್ಟ ಸರ್ಕಾರವನ್ನು ನೀವು ಕಿತ್ತು ಹಾಕಬೇಕು. ಅದಕ್ಕೆ ನೀವು ತಯಾರಾಗಬೇಕು ಎಂದು ಕರೆ ನೀಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ಆರಂಭವಾಗಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ನೀಡಿದೆ. ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಕಾನೂನಿನ ಅಡೆತಡೆಗಳನ್ನು ತೆಗೆದು, ಇದನ್ನು ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆಯಾಗಿ ಮಾಡಲು ಶಕ್ತಿ ನೀಡಬೇಕು ಎಂದರು.

ಹೆಚ್.ಕೆ ಪಾಟೀಲ್ ಅವರು ಮಹದಾಯಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದರು. ಕೇಂದ್ರ ಮಂತ್ರಿಗಳು ಈ ಯೋಜನೆಯ ಡಿಪಿಆರ್ ಗೆ ಕೇಂದ್ರ ಜಲಶಕ್ತಿ ಸಚಿವಾಲಯ ಅನುಮೋದನೆ ನೀಡಿರುವ ಆದೇಶವನ್ನು ಪ್ರಕಟಿಸಿದ್ದಾರೆ. ಈ ಆದೇಶದ ದಿನಾಂಕ ಇಲ್ಲ. ಕಳೆದ ಮೂರು ವರ್ಷಗಳಿಂದ ಏನನ್ನೂ ಮಾಡಲಾಗದ ಬಿಜೆಪಿಯವರು, ಈಗ ಗೋವಾಯದಲ್ಲಿ, ಕರ್ನಾಟಕದಲ್ಲಿ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಆದರೂ ನಮ್ಮ ರಾಜ್ಯಕ್ಕೆ ನ್ಯಾಯ ಕೊಡಲು ಆಗಿಲ್ಲ. ಈ ಆದೇಶದ ಕಡೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನ ಆಗಬೇಕು ಎಂದು ಹೇಳಿದ್ದಾರೆ. ಗೋವಾ ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ಹಂಪಡೆಯುವಂತೆ ಮಾಡಬಹುದಿತ್ತು. ಬಿಜೆಪಿಯದ್ದು ಬರೀ ಮೋಸ. ಇದೊಂದು ಕಾಗದದ ಮೇಲಿರುವ ಸರ್ಕಾರ. ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬದುಕು ಹಾಗೂ ಭಾವನೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅವರು ಕೇವಲ ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಬದುಕಿನ ಬಗ್ಗೆ ಚಿಂತನೆ ಮಾಡಿಲ್ಲ. ಯಾರ ಹೊಟ್ಟೆಯನ್ನೂ ತುಂಬಿಸುವ ಕೆಲಸ ಮಾಡುತ್ತಿಲ್ಲ. ಧರ್ಮ, ಜಾತಿ ವಿಚಾರದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನರಿಗೆ ಯಾವುದೇ ಅನುಕೂಲವಾಗಿಲ್ಲ. ರಾಜ್ಯ ಸರ್ಕಾರಕ್ಕೆ ಕೇವಲ 90 ದಿನ ಮಾತ್ರ ಉಳಿದಿದೆ. ನೀವೆಲ್ಲರೂ ಬಿಜೆಪಿಗೆ ಬಾಗಿಲು ಬಂದ್ ಮಾಡಬೇಕು. ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಓಡಾಡುವಂತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಆಶೀರ್ವಾದ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಕೃಷ್ಣಾ ಜನಾಂದೋಲನ ಬೃಹತ್ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಶಿವಾನಂದ ಪಾಟೀಲ್, ಶಾಸಕ ಯಶವಂತರಾವ್ ಗೌಡ ಪಾಟೀಲ್, ಮೇಲ್ಮನೆ ವಿರೋಧ ಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ರಾಜು ಅಲಗೂರ, ನಂಜಯ್ಯನಮಠ, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮತ್ತಿತರರು ಭಾಗವಹಿಸಿದ್ದರು.

*9 ದಿನಗಳಲ್ಲಿ 41.20 ಗಂಟೆ ಕಲಾಪ; 9 ಶಾಸಕರು ಅನುಮತಿ ಪಡೆಯದೆ ಗೈರು: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ*

https://pragati.taskdun.com/belagaviwinter-sessionspeaker-vishweshwar-hegade-kageripressmeet/

Related Articles

Back to top button