Kannada NewsKarnataka NewsLatest

ವಿದ್ಯಾರ್ಥಿನಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 20 ಸಾವಿರ ರೂ. ಆರ್ಥಿಕ ನೆರವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸಹ್ಯಾದ್ರಿ ನಗರದ ವಿದ್ಯಾರ್ಥಿನಿಯೊಬ್ಬಳಿಗೆ ಮುಂದಿನ ಶಿಕ್ಷಣಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 20 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.

ರಕ್ಷಿತಾ ಲಾಲಸಿಂಗ್ ಪಮ್ಮಾರ ಅವಳಿಗೆ ಬಿಎಸ್ ಸಿ ಶಿಕ್ಷಣಕ್ಕಾಗಿ ಅವರು ನೆರವು ನೀಡಿದರು. ರಕ್ಷಿತಾ ಪಿಯುಸಿಯಲ್ಲಿ ಶೇ.93 ಅಂಕ ಪಡೆದಿದ್ದಾಳೆ. ಆದರೆ ಅವಳ ತಂದೆ ಆರ್ಥಿಕ ಕಾರಣದಿಂದ ಅವಳಿಗೆ ಮುಂದೆ ಓದಿಸಲು ನಿರಾಕರಿಸಿದ್ದರು. 

ಹಾಗಾಗಿ ಬಾಲಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸಂಪರ್ಕಿಸಿದ್ದಳು. ಶಾಸಕರು ಅವಳ ಓದಿಗಾಗಿ 20 ಸಾವಿರ ರೂ. ನೀಡಿದರು.  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button