Kannada NewsKarnataka NewsLatestNational

*ಕುರಿಗಳ‌ನ್ನು ತಿಂದು ಹಟ್ಟಿಯಲ್ಲೆ ಮಲಗಿದ ಚಿರತೆ* 

ಪ್ರಗತಿವಾಹಿನಿ ಸುದ್ದಿ: ಕುರಿ ಹಟ್ಟಿಗೆ ಬಂದು ಕುರಿಗಳನ್ನು ತಿಂದು ಹಟ್ಟಿಯಲ್ಲೆ ಚಿರತೆ ಮಲಗಿದ ಘಟನೆ ಗಂಗಾವತಿ ತಾಲೂಕಿನ ಬಸವನ ದುರ್ಗ ಕ್ಯಾಂಪ್ ನಲ್ಲಿ ನಡೆದಿದೆ.‌

ಬಸವನದುರ್ಗ ಕ್ಯಾಂಪ್ ನ ಗುಡ್ಡದ ಮೇಲೆ ಕುರಿ ಹಟ್ಟಿ ಹಾಕಿದ್ದ ಕುರಿಗಾಹಿಗಳು ರಾತ್ರಿ ಮಲಗಿಕೊಂಡಿದ್ದಾರೆ. ಸದ್ದಿಲ್ಲದೆ ರಾತ್ರಿ ವೇಳೆ ಹಟ್ಟಿಗೆ ಬಂದಿರುವ ಚಿರತೆ ಎರಡು ಕುರಿಗಳನ್ನು ತಿಂದು ಹಟ್ಟಿಯಲ್ಲೆ ಮಲಗಿದೆ. ಇದನ್ನು ಗಮನಿಸಿದ ಕುರಿಗಾಹಿಗಳು ಹಟ್ಟಿಯಲ್ಲಿ ಚಿರತೆ ಮಲಗಿದ ವೀಡಿಯೋ ಸೆರೆಹಿಡಿದ್ದಾರೆ. 

ರಮೇಶ ಕುರುಬರ ಎಂಬುವವರಿಗೆ ಸೇರಿದ ಎರಡು ಕುರಿಗಳನ್ನು ಚಿರತೆ ತಿಂದು ಹಾಕಿದೆ.‌ ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಟ್ಟಿಗೆ ಆಗಮಿಸುತ್ತಿದ್ದಂತೆ ತಪ್ಪಿಸಿಕೊಂಡು ಗುಡ್ಡದ ಕಡೆ ಚಿರತೆ ಓಡಿ ಹೊಗಿದೆ.‌ ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪರೀಶಿಲನೆ ನಡೆಸಿದ್ದಾರೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button