Belagavi NewsBelgaum NewsKannada News
ಡಾ.ದಿಲೀಪ ಪಠಾಡೆ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚನ್ನಮ್ಮ ನಗರದ ಪಠಾಡೆ ಆಸ್ಪತ್ರೆಯ ವೈದ್ಯ ಡಾ.ದಿಲೀಪ ಪಠಾಡೆ ಶನಿವಾರ ನಿಧನರಾಗಿದ್ದಾರೆ.
ಭಾಗ್ಯನಗರದಲ್ಲಿ ವಾಸಿಸುತ್ತಿದ್ದ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶನಿವಾರ ಮಧ್ಯಾಹ್ನ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಬೆಳಗಾವಿಯಲ್ಲಿ 46 ವರ್ಷಗಳ ದೀರ್ಘ ಕಾಲದಿಂದ ಅವರು ವೈದ್ಯ ವೃತ್ತಿ ನಡೆಸುತ್ತಿದ್ದರು. ಕಿಡ್ನಿ ಮತ್ತು ಹೃದಯ ಕಾಯಿಲೆಯಿಂದ ಅವರು ಬಳಲುತ್ತಿದ್ದರು.




