Belagavi NewsBelgaum NewsCrime

*ಶಿವಾನಂದ ನೀಲಣ್ಣವರ ಅವರನ್ನು ಸಿಐಡಿ ಕಸ್ಟಡಿಗೆ ನೀಡಿದ ನ್ಯಾಯಾಲಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿವಾನಂದ ನಿಲಣ್ಣವರ ಪ್ರಕರಣದಲ್ಲಿ ಬೆಳಗಾವಿ ನ್ಯಾಯಾಲಯ ಇಂದು ಮಹತ್ವದ ಆದೇಶ ನೀಡಿದೆ.‌ ಇಂದು ಕೋರ್ಟ್ ನಲ್ಲಿ ನಡೆದ ಸುಧಿರ್ಘ  ವಿಚಾರಣೆ ಬಳಿಕ 10 ದಿನ ಸಿಐಡಿ ವಶಕ್ಕೆ ನೀಡಲಾಗಿದೆ. 

ಇಂದು ಬೆಳಗ್ಗೆಯಿಂದ ವಿಚಾರಣೆ ನಡೆಸಿದ ಬೆಳಗಾವಿ ಪೊಲೀಸರು ಆರೋಪಿಯನ್ನು  ಕೋರ್ಟ್ ಮುಂದೆ ಹಾಜರು ಪಡಿಸಲು ಮುಂದಾದರು. ಇದಕ್ಕಿಂತ ಮುಂಚೆ ಆರೋಪಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಗಂಗಾಧರ ಕೆ ಎನ್ ಅವರು  10 ದಿನ ಸಿಐಡಿಗೆ ವಶಕ್ಕೆ ನೀಡಿದ್ದಾರೆ. 

ಶಿವಾನಂದ ನೀಲಣ್ಣವರ್ ನನ್ನು ಹತ್ತು ದಿನ ವಶಕ್ಕೆ ಪಡೆದಿರೋ ಸಿಐಡಿ ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದೆ. ಇಂದು, ನಾಳೆ ಬೆಳಗಾವಿಯಲ್ಲಿಯೇ ವಿಚಾರಣೆ ಮಾಡೋ ಸಾಧ್ಯತೆ ಇದೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ತನಿಖೆ  ನಡೆಸಲಿದ್ದಾರೆ. 

Home add -Advt

Related Articles

Back to top button