Kannada NewsKarnataka News

*ರೈಲ್ವೆ ಹಳಿ ಮೇಲೆ ಗುಡ್ದ ಕುಸಿತ: ಹಲವು ರೈಲು ಸಂಚಾರ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ರೈಲು ಹಳಿಗಳ ಮೇಲೆಯೇ ಗುಡ್ಡ ಕುಸಿತವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಯಡೆಕುಮೇರಿ ಬಳಿ ನಡೆದಿದೆ.

Home add -Advt

ರೈಲ್ವೆ ಹಳಿಗಳ ಮೇಲೆಯೇ ಗುಡ್ಡ ಕುಸಿತವಾಗಿದ್ದು, ಈ ಭಾಗದ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಬೆಂಗಳೂರು-ಕಣ್ಣೂರು ಘಾಟ್ ರೈಲು, ಬೆಂಗಳೂರು-ಮುರುಡೇಶ್ವರ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಅರೆಬೆಟ್ಟ, ಯಡೆಕುಮೇರಿ ಮಧ್ಯೆ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಳಿ ಮೇಲೆ ಬಿದ್ದಿರುವ ಗುಡ್ದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೆಲ ರೈಲುಗಳು ಮಾರ್ಗಮಧ್ಯೆಯೇ ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ನೀರು, ಟೀ, ಕಾಫಿ ವ್ಯವಸ್ಥೆ ಮಾಡಲಾಗುತ್ತಿದೆ.


Related Articles

Back to top button