Kannada NewsKarnataka News
ಸವದತ್ತಿ ಬಳಿ ವ್ಯಕ್ತಿಯ ಮರ್ಡರ್

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಇಲ್ಲಿಯ ಹೂಲಿಯಲ್ಲಿ ವ್ಯಕ್ತಿಯೋರ್ವನನ್ನು ಮರ್ಡರ್ ಮಾಡಲಾಗಿದೆ.
ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿದೆ. ಮಲ್ಲಪ್ಪ ಗಂಗಪ್ಪ ನಂದೆಣ್ಣವರ್ ಎನ್ನುವ 62 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. 30 ವರ್ಷದ ಉಮೇಶ ಫಕೀರಪ್ಪ ಹಾವುಕಡದ್ ಆರೋಪಿ. ಉಮೇಶ್ ಮಲ್ಲಪ್ಪನ ಸಹೋದರ ಸಂಬಂಧಿಯಾಗಿದ್ದಾನೆ.
ಉಮೇಶ ಕುಡಿತದ ಚಟಕ್ಕೆ ಬಿದ್ದಿದ್ದು, ಕುಡಿಯಬೇಡ, ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿಕೋ ಎಂದು ಬುದ್ದಿ ಹೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
https://pragati.taskdun.com/order-to-install-rayanna-netaji-statue-in-every-government-college/



