Kannada NewsKarnataka News

ಗಣೇಶ ಪೆಂಡಾಲ್ ನಿರ್ಮಿಸುವ ಮುನ್ನ ಇದನ್ನು ಓದಿ

ಗಣೇಶ ಪೆಂಡಾಲ್ ನಿರ್ಮಿಸುವ ಮುನ್ನ ಇದನ್ನು ಓದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇದೇ ಸೆಪ್ಟಂಬರ್ 2ರಿಂದ ಆರಂಭವಾಗಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಕೆಲವು ಎಚ್ಚರಿಕೆಗಳನ್ನು ನೀಡಿದೆ.

Home add -Advt

ಗಣೇಶ ಪೆಂಡಾಲ್ ನಿರ್ಮಿಸುವಾಗ ಅವಘಡಗಳು ಉಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೆಲವು ಸೂಚನೆಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ.

  1. ಪೆಂಡಾಲ್ ಮೇಲೆ ವಿದ್ಯುತ್ ಪ್ರವಾಹ ತಂತಿಗಳು ಬಾರದಂತೆ ನೋಡಿಕೊಳ್ಳಬೇಕು. ಮತ್ತು ಟಿಸಿಗಳ ಅಕ್ಕಪಕ್ಕ ಪೆಂಡಾಲ್ ನಿರ್ಮಾಣ ಮಾಡಬಾರದು.
  2. ಪೆಂಡಾಲ್ ನಿರ್ಮಾಣಕ್ಕೆ ಬಳಸುವ ವಸ್ತುಗಳು ದಹನಶೀಲವಲ್ಲದಂತೆ ನೋಡಿಕೊಳ್ಳಬೇಕು.
  3. ಅಲಂಕಾರಿಕ ವಿದ್ಯುತ್ ಲೈಟಿಂಗ್ ಮಾಡುವಾಗ ಉತ್ತಮ ಗುಣಮಟ್ಟದ ಲೈಟಿಂಗ್ ಸರಗಳನ್ನು ಬಳಸಬೇಕು.
  4. ರಸ್ತೆಯ ಮೇಲೆ ಪೆಂಡಾಲ್ ನಿರ್ಮುಸುವಾಗ ಅಗ್ನಿಶಾಮಕ ವಾಹನ ಓಡಾಡುವಂತೆ 12-14 ಅಡಿ ರಸ್ತೆಯನ್ನು ಬಿಡಬೇಕು.
  5. ಪೆಂಡಾಲ್ ಹತ್ತಿರ ಎಲ್ಲ ತುರ್ತು ಸೇವಾ ಇಲಾಖೆಗಳ ದೂರವಾಣಿ ಸಂಖ್ಯೆಗಳನ್ನೊಳಗೊಂಡ ಫಲಕವನ್ನು ಹಾಕಬೇಕು.
  6. ಪೆಂಡಾಲ್ ಗಳಲ್ಲಿ ಸೀಮೆ ಎಣ್ಣೆ, ಪೆಟ್ರೋಲ್, ಡಿಸೆಲ್, ಸಿಡಿಮದ್ದುಗಳಂತಹ ದಹನಶೀಲ ವಸ್ತುಗಳನ್ನು ಶೇಖರಿಸಿಡಬಾರದು.
  7. ಪೆಂಡಾಲ್ ಹತ್ತಿರ 500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇಡಬೇಕು.
  8. ಪೆಂಡಾಲ್ ಹತ್ತಿರ ಮರಳು ತುಂಬಿದ 2-3 ಬಕೆಟ್ ಇಡಬೇಕು.
  9. ರಾತ್ರಿ ವೇಳೆಯಲ್ಲಿ ಮಂಟಪಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಪಹರೆಗಾರರನ್ನು ನೇಮಿಸಬೇಕು.
  10. ವಿದ್ಯುತ್ ಜೋಡಣೆ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಇನ್ಸುಲೇಷನ್ ಬಳಸಬೇಕು. ಉತ್ತಮ ಗುಣಮಟ್ಟದ ವಿದ್ಯುತ್ ಪಿನ್ ಬಳಸಬೇಕು. ವಿದ್ಯುತ್ ತಂತಿಗಳನ್ನು ನೇರವಾಗಿ ಪ್ಲಗ್ ಗೆ ಜೋಡಿಸಬಾರದು.
  11. ಹೈ ಪವರ್ ಹಾಲೋಜಿನ್ ಬಲ್ಬ್ ಗಳನ್ನು ಬಳಸಬೇಡಿ.
  12. ವಿದ್ಯುತ್ ತಂತಿಗಳನ್ನು ಕಾರ್ಪೆಟ್ ಕೆಳಗಡೆ ಹಾದುಹೋಗದಂತೆ ನೋಡಿಕೊಳ್ಳಬೇಕು.
  13. ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಿ.ಎಸ್.ಠಕ್ಕೇಕರ್ ಅವರನ್ನು (ಫೋನ್ – 9449735211) ಸಂಪರ್ಕಿಸಬೇಕು ಎಂದು ಕೋರಲಾಗಿದೆ.

Related Articles

Back to top button