Kannada NewsLatestNational

*ಕ್ಯಾಸಿನೋ ನಿರ್ದೇಶಕ ಶ್ರೀನಿವಾಸ್ ನಾಯಕ್ ಮೇಲೆ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ಗೋವಾದ ಕ್ಯಾಸಿನೋ ನಿರ್ದೇಶಕ ಶ್ರೀನಿವಾಸ್ ನಾಯಕ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

ಗೋವಾದ ಕ್ಯಾಸಿನ ಪ್ರೈಡ್, ಮೆಜೆಸ್ಟಿಕ್ ನ ನಿರ್ದೇಶಕರಾಗಿರುವ ಶ್ರೀನಿವಾಸ್ ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು. ಅವರ ಗೋವಾದ ಪಣಜಿ ಬಳಿಯ ಪರ್ವಲಿಯಲ್ಲಿರುವ ಮೆಜೆಸ್ಟಿಕ್ ಹೋಟೆಲ್ ಬಳಿ ಅವರ ಮೇಲೆ ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

Home add -Advt

ಶ್ರೀನಿವಾಸ್ ನಾಯಕ್ ಅವರಿಗಾಗಿಯೇ ಕಾದು ಕುಳಿತಿದ್ದ ಇಬ್ಬರು ದಾಳಿಕೋರರು, ಶ್ರೀನಿವಾಸ್ ನಾಯಕ್ ಹೋಟೆಲ್ ನಿಂದ ಹೊರಬರುತ್ತಿದ್ದಂತೆಯೇ ಭೀಕರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ನಾಯಕ್ ಹಾಗೂ ಅವರ ಭದ್ರತಾ ಸಿಬ್ಬಂದಿಗಳು ಬಚಾವ್ ಆಗಿದ್ದಾರೆ. ಯಾವುದೇ ಗುಂಡೇಟು ತಗುಲಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Related Articles

Back to top button