ಬಿಜೆಪಿ ಮೊದಲ ವಿಕೇಟ್ ಪತನ: ರಾಜಿನಾಮೆಗೆ ಸಿ.ಟಿ.ರವಿ ನಿರ್ಧಾರ

ಬಿಜೆಪಿ ಮೊದಲ ವಿಕೇಟ್ ಪತನ: ರಾಜಿನಾಮೆಗೆ ಸಿ.ಟಿ.ರವಿ ನಿರ್ಧಾರ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದೆ.

ನಿರೀಕ್ಷಿತ ಖಾತೆ ಸಿಗದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ರಾಜಿನಾಮೆಗೆ ನಿರ್ಧರಿಸಿದ್ದಾರೆ. ಸರಕಾರಿ ಕಾರನ್ನು ವಾಪಸ್ ಕಳಿಸಿರುವ ರವಿ, ನಾಳೆಯೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Home add -Advt

ಸಿ.ಟಿ.ರವಿಗೆ ಪ್ರವಾಸೋದ್ಯಮ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ ನೀಡಲಾಗಿತ್ತು. ಆದರೆ ಆ ಖಾತೆ ಅವರಿಗೆ ತೃಪ್ತಿ ತಂದಂತಿಲ್ಲ.

ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಮಂತ್ರಿಸ್ಥಾನ ನೀಡಿದಾಗಲೇ ಬಿಜೆಪಿಯ ಹಲವು ಶಾಸಕರು ತೀವ್ರ ಅಸಮಾಧಾನ ಹೊಂದಿದ್ದರು. ಈಗ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಪಕ್ಷದಲ್ಲಿ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಬಹುದೆೇ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ – ಮೂವರು ಉಪಮುಖ್ಯಮಂತ್ರಿ, ಬೊಮ್ಮಾಯಿಗೆ ಗೃಹ

ಇಬ್ಬರಿಗೆ ಸಚಿವ ಸ್ಥಾನ: ತಣ್ಣಗಾಗುತ್ತಾ ಅಸಮಾಧಾನದ ಹೊಗೆ?

ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ?

Related Articles

Back to top button