Latest
ಯಡೂರು ಗೋಶಾಲೆಗೆ ರಾಘವೇಶ್ವರ ಶ್ರೀಗಳ ಭೇಟಿ
ಪ್ರಗತಿವಾಹಿನಿ ಸುದ್ದಿ, ಯಡೂರು
ಇತಿಹಾಸ ಪ್ರಸಿದ್ಧ ಯಡೂರಿನ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಯಡೂರಿಗೆ ಆಗಮಿಸಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ಯಡೂರಿನ ಗೋಶಾಲೆಗೆ ಭೇಟಿ ನೀಡಿದರು.
ಶ್ರೀಶೈಲ ಜಗದ್ಗುರು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮತ್ತಿತರರು ಜೊತೆಗಿದ್ದಾರೆ. ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಭಾಗವಹಿಸಲಿದ್ದಾರೆ.




