
ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಚಲಿಸುತ್ತಿದ್ದ ಬೈಕ್ ಮೇಲೆ ಮರದ ಕೊಂಬೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಗಲಕೊಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
40 ವರ್ಷದ ರುಕ್ಮಿಣಿ ಶ್ರೀಶೈಲ್ ಮರನೂರ ಮೃತ ಮಹಿಳೆ. ಕುಳಲಿ ಗ್ರಾಮದ ರುಕ್ಮಿಣಿ ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಆಲದ ಮರದ ಕೊಂಬೆ ಮುರಿದು ಬೈಕ್ ಮೇಲೆ ಬಿದ್ದಿದೆ.
ಮಹಿಳೆ ಪತಿಯ ಕಣ್ಮುಂದೆಯೇ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರುಕ್ಮಿಣಿ ಪತಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಇಂದು BJP ಜನಸ್ಪಂದನಾ ಸಮಾವೇಶ; 5000 ಬಸ್ ವ್ಯವಸ್ಥೆ
https://pragati.taskdun.com/politics/bjp-janaspandanasamaveshadoddaballapurapolice-security/
https://pragati.taskdun.com/latest/heavy-raintree-collapsebike-riderdeathhasana/