Latest

ವಿಧವೆಯನ್ನು ವಿವಾಹವಾಗಿ ವಂಚಿಸಿದ ಸೈನಿಕ; ಮತ್ತೊಂದು ಮದುವೆಗೆ ರೆಡಿಯಾಗಿ ಸಿಕ್ಕಿಬಿದ್ದ

ಪ್ರಗತಿವಾಹಿನಿ ಸುದ್ದಿ; ಹಾಸನ: ಯೋಧನೊಬ್ಬ ವಿಧವೆಗೆ ಬಾಳು ಕೊಡುವುದಾಗಿ ಹೇಳಿ ನಂಬಿಸಿ ತಾಳಿ ಕಟ್ಟಿ ಈಗ ಮತ್ತೊಂದು ವಿವಾಹಕ್ಕೆ ರೆಡಿಯಾಗಿರುವ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ.

ಭಾರತೀಯ ಸೇನೆಯಲ್ಲಿ ಸೈನಿಕನಾಗಿರುವ ಕಿರಣ್ ಕುಮಾರ್ ಎಂಬಾತ 6 ತಿಂಗಳ ಹಿಂದೆ ವಿಧವೆ ಮಹಿಳೆಗೆ ಬದುಕು ಕೊಡುವುದಾಗಿ ಹೇಳಿ ಮದುವೆಯಾಗಿದ್ದಾನೆ. ಈಗ ಈ ವಿಚಾರವನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು ಹೊರಟಿದ್ದು, ಇನ್ನೇನು ವಧುವಿಗೆ ತಾಳಿಕೊಟ್ಟಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಮದುವೆ ನಿಲ್ಲಿಸಿದ್ದಾಳೆ.

ಹಾಸನದ ಹೊರವಲಯದ ಭೂವನಹಳ್ಳಿ ಕಲ್ಯಾಣ ಮಂಟಪದಲ್ಲಿ ಕಿರನ್ ಕುಮಾರ್ ಅದ್ಧೂರಿ ಮದುವೆಗೆ ಸಿದ್ಧನಾಗಿದ್ದ. ವಧುವಿಗೆ ತಾಳಿಕಟ್ಟುವ ವೇಳೆ ಮೊದಲ ಪತ್ನಿ ಪೊಲೀಸರೊಂದಿಗೆ ಎಂಟ್ರಿಕೊಟ್ಟಿದ್ದು, ಕಿರಣ್ ಕುಮಾರ್ ಅದಾಗಲೇ ತನ್ನನ್ನು ವಿವಾಹವಾಗಿದ್ದಾನೆ. ತನಗೆ ಬಾಳು ಕೊಡುವುದಾಗಿ ಹೇಳಿ ದೇವರ ಮುಂದೆ ತಾಳಿ ಕಟ್ಟಿದ್ದು ಈಗ ಮೋಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಕಲ್ಯಾಣ ಮಂಟಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಕಿರಣ್ ಕುಮಾರ್ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ವಿಧವೆ ಮಹಿಳೆ ವಿವಾಹವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ. ಮಹಿಳೆ ಕಿರಣ್ ಕುಮಾರ್ ಸುಳ್ಲು ಹೇಳುತ್ತಿದ್ದಾನೆ. ತನ್ನನ್ನು ಮದುವೆಯಾಗಿ ವಂಚಿಸಿದ್ದಾನೆ ಎಂದು ದೂರು ನೀಡಿದ್ದಾಳೆ. ಇಷ್ಟೆಲ್ಲ ಗಲಾಟೆಯಾಗುತ್ತಿದ್ದಂತೆ ಈ ಮದುವೆ ಬೇಡ ಎಂದು ನವವಧುವಿನ ಮನೆಯವರು ತಮ್ಮ ಮಗಳನ್ನು ವಾಪಸ್ ಮನೆಗೆ ಕರೆದೊಯ್ದಿದ್ದಾರೆ.

ನಾಲ್ವರು ಎಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ

https://pragati.taskdun.com/latest/lokayukta-raid4-engineers-arrestedraichur/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button