Latest

*ಮೀನು ಹಿಡಿಯಲು ಹೋಗಿದ್ದ ಮೂವರು ಬಾಲಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಲೆ ಮುಗಿದ ಬಳಿಕ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಗ್ರಾಮದಲ್ಲಿ ನಡೆದಿದೆ.

ವಿಜಯಪುರದ ಅಮಾನಿಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಕಾರ್ತಿಕ್ (16), ಧನುಷ್ (15) ಹಾಗೂ ಗುರುಪ್ರಸಾದ್ (6) ಮೃತರು.

Home add -Advt

ಶಾಲೆಗೆ ಹೋಗಿದ್ದ ಮಕ್ಕಳು ರಾತ್ರಿಯಾದರೂ ಮನೆಗೆ ವಾಪಸ್ ಆಗದ ಕಾರಣ ಮಕ್ಕಳಿಗಾಗಿ ಪೊಷಕರು ತಡರಾತ್ರಿವರೆಗೆ ಹುಡುಕಾಡಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಅಮಾನಿಕೆರೆಯಲ್ಲಿ ಇಂದು ಬೆಳಿಗ್ಗೆ ಓರ್ವ ಬಾಲಕನ ಶವ ಪತ್ತೆಯಾಗಿತ್ತು. ಮಕ್ಕಳು ನೀರುಪಾಲಾಗಿರುವ ಬಗ್ಗೆ ಅನುಮಾನಗೊಂಡು ಶೋಧ ನಡೆಸಿದಾಗ ಇನ್ನಿಬ್ಬರು ಬಾಲಕರ ಶವ ಪತ್ತೆಯಾಗಿದೆ. ಮೂವರು ಬಾಲಕರ ಮೃತದೇಹ ಕೆರೆಯಿಂದ ಹೊರತೆಗೆಯಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.


Related Articles

Back to top button