Latest

ಸಾವಳಗೀಶ್ವರ ಶ್ರೀ ರುದ್ರಾಕ್ಷಿಮಠದ ಉತ್ತರಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಯನ್ನಾಗಿ ತಬಚಿಯ ಸಾವಳಗೀಶ್ವರ ದೇವರನ್ನು ಆಯ್ಕೆ ಮಾಡಲಾಗಿದೆ.ಆಯ್ಕೆ ಸಂಬಂಧ ನೇಮಕ ಮಾಡಲಾಗಿದ್ದ ಸಮಿತಿಯ ಸದಸ್ಯರಾಗಿದ್ದ ನಿಡಸೋಸಿಯ ಶಿವಲಿಂಗೇಶ್ವರ ಶ್ರೀಗಳು ಈ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.31 ನಾಗನೂರ ರುದ್ರಾಕ್ಷಿಮಠದಲ್ಲಿ ಪುರ ಪ್ರವೇಶ ಹಾಗೂ ಸ್ವಾಗತ ಸಮಾರಂಭ ನಡೆಯಲಿದೆ. ವರ್ಷಾಂತ್ಯದೊಳಗೆ ನಾಗನೂರು ರುದ್ರಾಕ್ಷಿ ಮಠದ ಸಂಪೂರ್ಣ ಉತ್ತರಾಧಿಕಾರತ್ವವನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂದರು.

ಹಂದಿಗುಂದದ ಶಿವಾನಂದ ಶ್ರೀ, ಮಾಹಾಂತೇಶ ಕೌಜಲಗಿ, ಶಿವಕುಮಾರ ಸಂಬರಗಿಮಠ ಮೊದಲಾದವರು ಇದ್ದರು.

Home add -Advt

Related Articles

Back to top button