Kannada NewsKarnataka News

ಅರಮನೆ ಪುನರ್ ನಿರ್ಮಾಣ ಸೇರಿ ಕಿತ್ತೂರು ಅಭಿವೃದ್ಧಿ ಕ್ರಿಯಾಯೋಜನೆಗೆ ರಾಜ್ಯಸರಕಾರ ಅನುಮೋದನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಿತ್ತೂರು ಅಭಿವೃದ್ಧಿ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.

10 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾಮಗಾರಿಗಳನ್ನು ಮಾಡಲು ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಇದೀಗ ಇದಕ್ಕೆ ಸರಕಾರ ಒಪ್ಪಿಗೆ ನೀಡಿದೆ.

Home add -Advt

ರಾಣಿ ಚನ್ನಮ್ಮ ಸ್ಮಾರಕ ಭವನ ನಿರ್ಮಾಣ, ಸಮಾಧಿ ಸ್ಥಳ ಹಾಗೂ ಚೌಕಿಮಠ ಗದ್ದುಗೆ ಅಭಿವೃದ್ಧಿ, ಕಿತ್ತೂರು ಸಂಸ್ಥಾನದ ಅರಮನೇ ಪುನರ್ ನಿರ್ಮಾಣ, ಬೆಳವಡಿ ಮಲ್ಲಮ್ಮನ ಪ್ರತಿಮೆ ನಿರ್ಮಾಣ, ಕಿತ್ತೂರು ಸಂಸ್ಥಾನದ ಕಾಗದಪತ್ರಗಳ ಸಂರಕ್ಷಣೆ ಯೋಜನೆಗಳು ಇದರಲ್ಲಿ ಸೇರಿವೆ.

ಸಂಸದ ಅಣ್ಣಾ ಸಾಹೇಬ ಜೊಲ್ಲೆ ಈ ಕುರಿತು ಮಾಡಿರುವ ಟ್ವೀಟ್ ಇಲ್ಲಿದೆ –

Related Articles

Back to top button